ಅಬಾಕಸ್ ಸ್ಪರ್ಧೆಯಲ್ಲಿ ಬ್ರಾಹ್ಮಿ ಸಿ. ಶೆಟ್ಟಿ ರಾಜ್ಯ ಚಾಂಪಿಯನ್
ಪಡುಬಿದ್ರಿ:ತುಮಕೂರಿನ ಟಿ.ಆರ್.ಎಸ್. ಅಬಾಕಸ್ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬ್ರಾಹ್ಮಿ ಸಿ. ಶೆಟ್ಟಿ ಚಾಂಪಿಯನ್ ಆಗಿ ಸಾಧನೆ ಮಾಡಿದ್ದಾರೆ.
ಮಂಗಳೂರಿನ ಸೆಂಟ್ ತೆರೆಸಾ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಬ್ರಾಹ್ಮಿ ಸಿ. ಶೆಟ್ಟಿ ಅವರು ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಪದಕ ವಿಜೇತರಾಗಿದ್ದಾರೆ.
ಅವರು ಮಂಗಳೂರಿನ ಕದ್ರಿಯ ನಿವಾಸಿಯಾಗಿದ್ದು, ಎರ್ಮಾಳ್ ಎಲ್ಲದಡಿ ಚಂದ್ರಹಾಸ್ ಶೆಟ್ಟಿ ಮತ್ತು ಅಮೃತಾ ಶೆಟ್ಟಿ ಪುತ್ರಿ. ಮಂಗಳೂರಿನ ಕದ್ರಿಯ ಡೈನಾಮಿಕ್ ಲರ್ನಿಂಗ್ ಸೆಂಟರ್ ಸಂಸ್ಥೆಯಲ್ಲಿ ಅಕ್ಷತಾ ಸುವರ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ


















