ಮಂಗಳೂರು ರಥೋತ್ಸವ ಪ್ರಾರಂಭ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಇಂದು ಸೋಮವಾರ ಧ್ವಜಾರೋಹಣ ಮೂಲಕ ವಿದ್ಯುಕ್ತವಾಗಿ ಪ್ರಾರಂಭವಾಯಿತು . ರಥೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರು ಯಜ್ಞಕ್ಕೆ ಚಿತ್ತೈಸಿದರು ಬಳಿಕ ಯಜ್ಞದಲ್ಲಿ ಲಘು ಪೂರ್ಣಾಹುತಿ ಧ್ವಜಾರೋಹಣ ನೆರವೇರಿತು . ಬಳಿಕ ಸಮಾರಾಧನೆ ನಡೆಯಿತು . ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಆಗಮನ ಬಳಿಕ ರಾತ್ರಿ ಪೂಜೆ ನಡೆಯಿತು . ಐದು ದಿನಗಳ ಪರ್ಯಂತ ಮಹೋತ್ಸವ ಲಕ್ಷಾಂತರ ಭಜಕರು ಪಾಲ್ಗೊಳ್ಳಲಿದ್ದು ದಿನನಿತ್ಯ ವಿದ್ವತ್ ವೈದಿಕರಿಂದ ಪೂಜಾ ವಿಧಿವಿಧಾನಗಳು ನಡೆಯಲಿರುವುದು ದಿನನಿತ್ಯ ರಾತ್ರಿ ಉತ್ಸವಗಳು ನಡೆಯಲಿರುವುದು . ದಿನಾಂಕ 16 02 2024 ರಂದು ಬ್ರಹ್ಮರಥೋತ್ಸವ ನಡೆಯಲಿದೆ .

Related Posts

Leave a Reply

Your email address will not be published.