ಸುಬ್ರಹ್ಮಣ್ಯ ಶ್ರೀ ಗಳ ಭೇಟಿ ಮಾಡಿದ ಅರಣ್ಯ ಸಚಿವರು
ಸುಬ್ರಹ್ಮಣ್ಯ: ರಾಜ್ಯ ಸರಕಾರದ ಪರಿಸರ,ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಆರಂಭದಲ್ಲಿ ಸಚಿವರು ಶ್ರೀಗಳಿಗೆ ಶಾಲು ಹಾಕಿ ಫಲ ಕಾಣಿಕೆ ನೀಡಿ ಹರಸಿದರು.ಬಳಿಕ ಶ್ರೀಗಳು ಸಚಿವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ಪ್ರಮುಖರಾದ ಕೃಷ್ಣಪ್ಪ, ರಕ್ಷಿತ್ ಶಿವರಾಂ, ಸುಧೀರ್ ಶೆಟ್ಟಿ, ಅಶೋಕ್ ನೆಕ್ರಾಜೆ, ನಿತ್ಯಾನಂದ ಮುಂಡೋಡಿ,ಭರತ್ ಮುಂಡೋಡಿ, ಹರೀಶ್ ಇಂಜಾಡಿ, ವಿಮಲಾ ರಂಗಯ್ಯ, ಕೃಷ್ಣಮೂರ್ತಿ ಭಟ್, ಎ.ಸುಬ್ರಹ್ಮಣ್ಯ ರಾವ್, ಅರಣ್ಯ ಇಲಾಖೆಯ ಡಿಸಿಎಫ್ ಅಂತೋಣಿ ಮರಿಯಪ್ಪ, ಸಿಸಿಎಫ್ ಕರಿಕಾಲನ್, ಎಸಿಎಫ್ ಪ್ರವೀಣ್ ಶೆಟ್ಟಿ, ಆರ್ ಎಫ್ ಓ ಮಂಜುನಾಥ್ ಎನ್ ಸೇರಿದಂತೆ ಇಲಾಖಾಧಿಕಾರಿಗಳು ಸಿಬ್ಬಂಧಿಗಳು ಉಪಸ್ಥಿತರಿದ್ದರು.