ಮಂಜೇಶ್ವರದ ಮೊರತ್ತಾಣೆ ನಿವಾಸಿ ರೋಹಿತಾಕ್ಷ ನಾಪತ್ತೆ

ಮಂಜೇಶ್ವರದ ಮೊರತ್ತಾಣೆ ನಿವಾಸಿ ಬಾಬು ಬೆಳ್ಚಪ್ಪಾಡ ಎಂಬವರ ಪುತ್ರ ರೋಹಿತಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ. ಮಂಜೇಶ್ವರ ಸಮೀಪದ ದೈಗೋಳಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಎಪ್ರಿಲ್ 4ರಂದು ಕೆಲಸಕ್ಕೆಂದು ಹೋದಾವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆತನ ಸಹೋದರ ಗಂಗೂ ಮೊರತ್ತಾಣೆ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ರೋಹಿತಾಕ್ಷನ ಬಗ್ಗೆ ಸುಳಿವು ಸಿಕ್ಕಲ್ಲಿ ಮಂಜೇಶ್ವರದ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಸಂಖ್ಯೆ 9074266567 ಮತ್ತು 8848073431ಗೆ ತಿಳಿಸಲು ಕೋರಲಾಗಿದೆ.

Related Posts

Leave a Reply

Your email address will not be published.