HomeFresh Newsಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ನೋಟೀಸು

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ನೋಟೀಸು

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ಹೆಚ್ಚುವರಿ ಸಂಬಳ ಹಿಂತಿರುಗಿಸುವಂತೆ ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ನೋಟೀಸು ನೀಡಿರುವುದು ಸುದ್ದಿ. ಆದರೆ ಆದಾಯ ತೀರಾ ವ್ಯತ್ಯಾಸದ ಹಲವು ಆಲಯಗಳಿಗೆ ನೋಟೀಸು ನೀಡಿರುವುದು ಕಂಡು ಬಂದಿದೆ.

archaka

ಕಣ್ಣನ್ ಅರ್ಚಕರಾಗಿರುವ ಆಲಯದ ವಾರ್ಷಿಕ ಆದಾಯ ಕೊನೆ ದರ್ಜೆ ದೇವಾಲಯದ ಆದಾಯಕ್ಕಿಂತಲೂ ಕಡಿಮೆ ಇದೆ. ಆದ್ದರಿಂದ ರೂ. 7,500 ರೂಪಾಯಿ ಸಂಬಳ ಪಡೆಯುವ ಅವರು ಹೆಚ್ಚುವರಿ ತಿಂಗಳ ರೂ. 4,500 ಒಟ್ಟು 4,74,000 ರೂಪಾಯಿ ಸಂಬಳ ಹಿಂತಿರುಗಿಸುವಂತೆ ನೋಟೀಸು ಎನ್ನಲಾಗಿದೆ. ಆಲಯಗಳಲ್ಲಿ ಹುಂಡಿ ಆದಾಯ ಮೀರಿ ತಟ್ಟೆ ಆದಾಯ ಆದಾಗ ಈ ಸಮಸ್ಯೆ ಬರುತ್ತದೆ ಎಂದೂ ಹೇಳಲಾಗಿದೆ.

archaka

ಸರಕಾರಿ ಧರ್ಮ ದತ್ತಿ ಅಡಿಯ 25 ಲಕ್ಷ ರೂಪಾಯಿ ಮೀರಿದ ಆದಾಯದ ದೇವಸ್ಥಾನಗಳು ಎ ಗ್ರೇಡ್ ಪಡೆದಿವೆ. 5 ಲಕ್ಷ ರೂಪಾಯಿ ಮೀರಿ ಆದಾಯದ ಆಲಯಗಳು ಬಿ ಗ್ರೇಡ್ ಪಡೆದಿವೆ. 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯದ ದೇವಾಲಯಗಳು ಸಿ ಗ್ರೇಡ್ ಹೊಂದಿವೆ. ಇನ್ನುಳಿದ ಗುಡಿಗಳು ಅನಂತರದ್ದು. ಅದಕ್ಕೆ ತಕ್ಕಂತೆ ಅರ್ಚಕರ ಸಂಬಳ, ಅರ್ಚಕರ ಸಂಖ್ಯೆ, ಇತ್ಯಾದಿ ದೇವಾಲಯ ವ್ಯವಸ್ಥೆ ಇರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments