ಪಡುಬಿದ್ರಿ: ಯುವಕ ನಾಪತ್ತೆ, ಹೊಳೆಗೆ ಹಾರಿರುವ ಶಂಕೆ

ವ್ಯಕ್ತಿಯೋರ್ವರು ಸ್ಕೂಟರ್‌ನ್ನು ಉದ್ಯಾವರ ಸೇತುವೆಯ ಬಳಿ ಇಟ್ಟು ನಾಪತ್ತೆಯಾಗಿದ್ದು, ಅವರು ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಸ್ಕೂಟರ್ ನೋಂದಾಣಿ ಸಂಖ್ಯೆಯ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಸ್ಕೂಟರ್ ಉಡುಪಿ ಮೂಲದ ರವೀಂದ್ರ ಎಂಬವರಿಗೆ ಸೇರಿದ್ದಾಗಿದ್ದು, ಅವರು ಉಡುಪಿಯ ಬೃಹತ್ತ್ ಎಲೆಕ್ಟ್ರಾನಿಕ್ ಮಳಿಗೆಯ ಚಾಲಕನಾಗಿ ದುಡಿಯುತ್ತಿದ್ದರು ಎನ್ನಲಾಗಿದೆ. ಹೊಳೆಯಲ್ಲಿ ಹೆಲ್ಮೆಟ್ ತೇಲುತ್ತಿದ್ದು ಈಜು ಪಟ್ಟುಗಳು ನದಿಯಲ್ಲಿ ಆ ವ್ಯಕ್ತಿಗಾಗಿ ಜಾಲಾಡಿದರೂ ಪತ್ತೆಯಾಗಿರಲಿಲ್ಲ. ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published.