ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ : ಅಧ್ಯಕ್ಷರಿಗೆ ಆಹ್ವಾನ

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.12, 13ರಂದು ಅಮ್ಮುಂಜೆ ಅನುದಾನಿತ ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಬಾಲಕೃಷ್ಣ ಗಟ್ಟಿ ಅವರನ್ನು ಅಧಿಕೃತವಾಗಿ ‌ಆಮಂತ್ರಿಸಲಾಯಿತು. ಈ ಸಂದರ್ಭ ‌ಕಸಾಪ ತಾಲೂಕು ‌ಅಧ್ಯಕ್ಷ‌ ವಿಶ್ವನಾಥ ಬಂಟ್ವಾಳ, ‌ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್ ಮತ್ತು ರಮಾನಂದ ನೂಜಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೀತಾ ಎಸ್.ಕೊಂಕೋಡಿ, ವಿಟ್ಲ ಹೋಬಳಿ‌ ಅಧ್ಯಕ್ಷರಾದ ಗಣೇಶ ಪ್ರಸಾದ ಪಾಂಡೇಲು, ಮಾರ್ಗದರ್ಶನ ಮಂಡಳಿ‌ ಸದಸ್ಯರಾದ ಹರೀಶ ಮಾಂಬಾಡಿ, ಸದಸ್ಯರಾದ ರೇಖಾ ವಿಶ್ವನಾಥ್, ಪ್ರೊ. ಬಾಲಕೃಷ್ಣ ಗಟ್ಟಿ ಅವರ ಪತ್ನಿ ಮೀರಾ ಬಾಲಕೃಷ್ಣ ಗಟ್ಟಿ ಉಪಸ್ಥಿತರಿದ್ದರು

Related Posts

Leave a Reply

Your email address will not be published.