Home Archive by category Uncategorized (Page 10)

ಮಗನ ಗದ್ದೆಯಿಂದ ಹೂಕೋಸು ಕಿತ್ತ ತಾಯಿ : ಅಮ್ಮನನ್ನೇ ಕಂಬಕ್ಕೆ ಕಟ್ಟಿ ಹೊಡೆದ ಪುತ್ರ

ಒಡಿಶಾ ರಾಜ್ಯದ ಕಿಯೊಂಜಾರ್ ಜಿಲ್ಲೆಯಲ್ಲಿ ಹೂಕೋಸು ಕಿತ್ತು ಪಲ್ಯ ಮಾಡಿ ತಿಂದಿದ್ದಾರೆ ಎಂದು ಮಗನೇ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. 70ರ ಮಹಿಳೆ ಸರಸಪಸಿ. ಈಕೆಯ ಕಿರಿಯ ಮಗ ಪ್ರತ್ಯೇಕ ಕೃಷಿ ಭೂಮಿ ಹೊಂದಿದ್ದ. ಆಕೆ ಆ ಮಗನ ಹೊಲದಿಂದ ಹೂಕೋಸು ತಂದು ಪಲ್ಯ ಮಾಡಿ ತಿಂದಿದ್ದಳು. ಕೆರಳಿ ಜಗಳಕ್ಕೆ ಬಂದಿದ್ದ ಮಗ. ತಾಯಿಯೂ

ಮೂಗಜ್ಜನ ಕೋಳಿ ಅರೆ ಭಾಷಾ ಚಿತ್ರ : ನವೀನ್ ಡಿ. ಪಡೀಲ್‍ಗೆ ಉತ್ತಮ ನಟ ಪ್ರಶಸ್ತಿ

ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು ಮೂಗಜ್ಜನ ಪಾತ್ರ ವಹಿಸಿದ್ದಾರೆ. ಕೋಳಿಗಳ ವಿಷಯದಲ್ಲಿ ಜೀವ ಇಟ್ಟಿರುವ ಮಾತೇ ಇಲ್ಲದ ಒರಟು ಮುದುಕನ

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕ

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕಗೊಂಡಿದ್ದಾರೆ. ಏಳು ತಿಂಗಳ ಬಳಿಕ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ. ವಿಧಾನ ಪರಿಷತ್ತಿನಲ್ಲಿ ಉಪ ನಾಯಕರಾಗಿ ಸುನಿಲ್ ವಲ್ಯಾಪುರೆ ಅವರನ್ನು ನೇಮಿಸಲಾಗಿದೆ. ಅದೇ ವೇಳೆ ಎನ್. ರವಿಕುಮಾರ್ ಅವರನ್ನು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರಾಗಿ ಬಿಜೆಪಿ ನೇಮಕ ಮಾಡಿದೆ. ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರನ್ನು ವಿಧಾನ ಸಭೆಯಲ್ಲಿ ಉಪ ನಾಯಕರಾಗಿ ಮತ್ತು

ಬೈಕಂಪಾಡಿ : ವಲಸೆ ಕೂಲಿ ಕಾರ್ಮಿಕನ ನಿಗೂಢ ಸಾವು

ಬಹು ಕಾಲದಿಂದ ಮಂಗಳೂರು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‍ನಲ್ಲಿ ಕೂಲಿಕಾರ್ಮಿಕನಾಗಿದ್ದ ಒಡಿಶಾ ಮೂಲದ ವ್ಯಕ್ತಿಯ ಮೃತ ದೇಹವು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿಯು ಒಡಿಶಾ ರಾಜ್ಯದ ಜಾವಪುರ ಜಿಲ್ಲೆಯ 44ರ ವಲಸೆ ಕಾರ್ಮಿಕ ರಶಿಂರಂಜನ್ ಎಂದು ತಿಳಿದುಬಂದಿದೆ. ಕಾಲಿನ ಮಂಡಿ ಬಳಿ ಗಾಯದ ಗುರುತುಗಳಿದ್ದು ಲಘು ವಾಹನ ಗುದ್ದಿ ಸಾವು ಉಂಟಾಗಿರಬಹುದು ಎಂದು ಅನುಮಾನಾಸ್ಪದ ಪ್ರಕರಣವನ್ನು ದಾಖಲಿಸಲಾಗಿದೆ.ಪಣಂಬೂರು ಮತ್ತು ಮಂಗಳೂರು ಸಂಚಾರ

ಆರೋಪಿ ಬ್ರಿಜ್ ಭೂಷಣ್‍ರ ಆಪ್ತ ಸಂಜಯ್ ಸಿಂಗ್ : ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ

ಡಬ್ಲ್ಯುಎಫ್‍ಐ- ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಈಗ ಹೊರ ಹೋಗುವ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್‍ರ ಆಪ್ತ, ಸಂಘ ಪರಿವಾರದ ಸಂಜಯ್ ಸಿಂಗ್ ಆಯ್ಕೆ ಆದರು. ಇವರು ಪ್ರಧಾನಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯವರಾಗಿದ್ದು ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಜೊತೆಗೆ ಇದ್ದವರು. ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಡಬ್ಲ್ಯುಎಫ್‍ಐ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್

ತಿದ್ದುಪಡಿ ಮಸೂದೆ ಪಾಸು ಮಾಡಿಕೊಳ್ಳಲು ಕಸರತ್ತು :ಅಮಾನತು ಮೂಲಕ ಮೂಕವಾದ ಸಂಸತ್ತು

ಸಂಸತ್ತಿನಿಂದ 146 ಸಂಸದರನ್ನು ಅಮಾನತು ಮಾಡುವ ಮೂಲಕ ಹಿಂದೆ ಯಾವ ಸರಕಾರವೂ ಮಾಡದ ಸಾಧನೆಯನ್ನು ಒಕ್ಕೂಟ ಸರಕಾರ ಮಾಡಿದೆ. ದೊಡ್ಡ ಮೂರ್ತಿ, ದೊಡ್ಡ ರಸ್ತೆ, ದೊಡ್ಡ ಸುರಂಗ, ಹೆಚ್ಚು ಮಸೂದೆ, ಹೊರಗೆ ದೊಡ್ಡ ಮತ್ತು ಹೆಚ್ಚು ಮಾತು. ಸಂಸತ್ತಿನೊಳಗೆ ಬಾಯಿಗೆ ಬೀಗ. ಒಕ್ಕೂಟ ಸರಕಾರದ ಗಿನ್ನೆಸ್ ದಾಖಲೆ ತಿದ್ದುಪಡಿ ಮಸೂದೆಗಳ ಸಂಖ್ಯೆಗೆ ಮಾತ್ರ ಸಂಬಂಧಿಸಿಲ್ಲ. ಪ್ರತಿಪಕ್ಷಗಳನ್ನು ಹೊರಗಿಟ್ಟು ಅವನ್ನು ಪಾಸು ಮಾಡಿಸಿಕೊಳ್ಳುವುದಕ್ಕೂ ಸಂದಿದೆ. ಹಿಂದೆ ಈ ಸರಕಾರ ಹಲವು ಬಾರಿ

ಬೆಳ್ತಂಗಡಿ: ಶಿಬಾಜೆಯಲ್ಲಿ ಅಂಗಡಿ ಧ್ವಂಸ: ಸ್ಥಳೀಯ ಮುಖಂಡರಿಂದ ಕೃತ್ಯ ಖಂಡನೆ

ಸುಮಾರು 25 ವರ್ಷಗಳಿಂದ ವರ್ಷಗಳಿಂದ ನಡೆಸುತ್ತಿದ್ದ ಅಂಗಡಿಯನ್ನು ರಾತ್ರೋ ರಾತ್ರಿ ದ್ವಂಸ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸು ಪೂಜಾರಿ ಎಂಬವರಿಗೆ ಸೇರಿದ ಅಂಗಡಿಯನ್ನು ದ್ವಂಸ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಮುಖಂಡ ನವೀನ್ ನೆರಿಯ ಮಾತನಾಡಿ ಶಿಬಾಜೆ ಗ್ರಾಮದಲ್ಲಿ ಹಲವಾರು ಬೇಡದ ಚಟುವಟಿಕೆ ನಡೆಯುತ್ತಿವೆ. ಇದಕ್ಕೆ ದ್ವಂಸಕಾರಿ ತಂಡವೇ ಕಾರಣ. ಇಲ್ಲಿನ ದಲಿತರಿಗೆ ಹಾಗೂ ಇತರರಿಗೆ ಬದುಕಲು ಅವಕಾಶ ಕೊಡಿ ಎಂದು

ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವ; ಭಕ್ತರಿಂದ ಎಡೆಸ್ನಾನ ಸೇವೆ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ  ಶನಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ  ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು 95ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು.ಇನ್ನು ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ

  ಕುಕ್ಕೆ: ಅನ್ನದಾನದ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ

ಸುಬ್ರಹ್ಮಣ್ಯ :ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ದಿನವಾದ ಶನಿವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು.ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು.ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು ಜಾತ್ರಾ ಸಮಯ ವಿಶೇಷ ಬೋಜನ ಪ್ರಸಾದ ವಿತರಣೆಯ ಸಂಕೇತವಾಗಿ ಶ್ರೀ

ಲೋಕಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿದ ಇಬ್ಬರು ಅಪರಿಚಿತರು

ಬುಧವಾರ ಡಿಸೆಂಬರ್ 13ರಂದು ಲೋಕಸಭೆಯೊಳಕ್ಕೆ ಇಬ್ಬರು ಅಪರಿಚಿತರು ಪ್ರವೇಶ ಪಡೆದಿದ್ದುದು ಸ್ವಲ್ಪ ಕಾಲ ಸಂಸದರು ಕಕ್ಕಾಬಿಕ್ಕಿಯಾಗಿ ಎದ್ದೋಡುವಂತೆ ಮಾಡಿತು. ಆದರೆ ಅವರನ್ನು ಅಲ್ಲೇ ಸೆರೆ ಹಿಡಿಯಲಾಯಿತು. ಅವರು ಗ್ಯಾಲರಿಗೆ ಪಾಸ್ ಪಡೆದು ಅಲ್ಲಿಂದ ಲೋಕಸಭೆಯೊಳಕ್ಕೆ ಇಳಿದಿರುವುದಾಗಿ ತಿಳಿದು ಬಂದಿದೆ. ಲೋಕ ಸಭೆಯ ಕಲಾಪ ನಡೆಯುತ್ತಿದ್ದಾಗಲೇ ಈ ಇಬ್ಬರು ಅಪರಿಚಿತರು ನುಗ್ಗಿ ಕೂಗಾಡಿದ್ದು ಇಡೀ ಸಂಸತ್ತು ಎದ್ದು ಭಯಭೀತವಾಯಿತು. ಸ್ಪೀಕರ್ ಕೂಡಲೆ ಸ್ಥಾನದಿಂದ