ವಿಜಯಪುರ ; ಗೋದಾಮು ಮಣ್ಣು ಸಹಿತ ಕಟ್ಟಡ ಕುಸಿದು 7 ಕಾರ್ಮಿಕರ ಸಾವು
ವಿಜಯಪುರ ನಗರದ ಹೊರ ವಲಯದಲ್ಲಿರುವ ರಾಜಗುರು ಫುಡ್ಸ್ ಗೋದಾಮು ಕುಸಿದು ಏಳು ಮಂದಿ ಕಾರ್ಮಿಕರು ದುರ್ಮರಣಕ್ಕೆ ಒಳಗಾದರು. ಇದು ಮೆಕ್ಕೆ ಜೋಳ ಸಂಗ್ರಹಣಾ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಗೋದಾಮು ಆಗಿದೆ. ಸಾವಿಗೀಡಾದವರೆಲ್ಲರೂ ಬಿಹಾರದಿಂದ ಬಂದ ವಲಸೆ ಕಾರ್ಮಿಕರಾಗಿದ್ದಾರೆ. ಇಲ್ಲಿಯವರೆಗೆ ಏಳು ಶವಗಳನ್ನು ಮಣ್ಣಿನೊಳಗಿನಿಂದ ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಯಾರಾದರೂ ಮಣ್ಣಿನಡಿ ಇರುವರೇ ಎಂಬ ಅನುಮಾನ ಇದ್ದು ಕಾರ್ಯಾಚರಣೆ ಮುಂದುವರಿದಿದೆ.