Home Archive by category ಕರಾವಳಿ (Page 83)

ಬೈಂದೂರು: ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪ

ಬೈಂದೂರು: ಇಡೂರು ಕುಂಜ್ಞಾಡಿ ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪಬೈಂದೂರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಇಡೂರು ಕುಂಜ್ಞಾಡಿ ಗ್ರಾಮದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಂದಿನ ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಮರುಪರಿಶೀಲಿಸಬೇಕು ಹಾಗೂ ನೀಡಿರುವ ದಾಖಲೆ ಪತ್ರಗಳನ್ನು ಹಿಂಪಡೆಯಬೇಕೆಂದು

ಬಂಟ್ವಾಳ: 2ನೇ ವರ್ಷದ ಚಿಣ್ಣರೋತ್ಸವಕ್ಕೆ ಸಿದ್ಧಗೊಂಡಿದೆ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ

ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ, ಹಾಗೂ ಕ್ರೀಡಾ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಎರಡನೇ ವರ್ಷದ ದಡ್ಡಲಕಾಡು ಚಿಣ್ಣರೋತ್ಸವಕ್ಕೆ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಗೊಳ್ಳುತ್ತಿದೆ. ಕಳೆದ ವರ್ಷದ ಅತ್ಯದ್ಭುತ ಯಶಸ್ಸಿನಿಂದ ಪ್ರೇರಣೆ ಪಡೆದು ಈ ವರ್ಷವೂ ಹಲವಾರು ವಿಶಿಷ್ಠ, ವಿನೂತನ ಕಾರ್ಯಕ್ರಮ ನೀಡಲು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ತಯಾರಾಗಿದ್ದು ಸರ್ಕಾರಿ ಶಾಲೆಯಲ್ಲಿ ಇಂತಹ

ಮಂಜೇಶ್ವರ: ರಸ್ತೆ ಬದಿ ಹೂವಿನ ಗಿಡ ನೆಡುವ ಕಾರ್ಯಕ್ರಮ

ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್ ಮತ್ತು ಕೆಎಯು –ಇಟಿಸಿ ಮಂಜೇಶ್ವರ ಸಹಯೋಗದಲ್ಲಿ ವರ್ಕಾಡಿ ಪಂಚಾಯತಿನ ಹದಿಮೂರನೇ ಧರ್ಮನಗರ ವಾರ್ಡ್‍ನ ಪಿ.ಎಚ್.ಸಿ- ಕೆವಿಕೆ ರಸ್ತೆಯ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ ಹರಿತ ರೋಡ್ ಕಾರ್ಯಕ್ರಮಕ್ಕೆ ಹೂವಿನ ಗಿಡಗಳನ್ನು ನೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಸಾಮಾನಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ಧರ್ಮನಗರ,

ನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ, ತೀವ್ರ ಗಾಯಗೊಂಡ ಬೈಕ್ ಸವಾರ. ಸ್ಕೂಟರ್‌ ಸವಾರ ಶೇಖಬ್ಬ ಎಂಬವರು KA19HL2146 ನೋಂದಣಿ ನಂಬ್ರದ ಸ್ಕೂಟರನ್ನು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆದ್ದಾರಿಯ ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ಹೋಗಲು ಡಿವೈಡರ್‌ ನ

ಮಂಗಳೂರು ಸಿಸಿಬಿ ಡಿವೈಎಸ್‌ಪಿ ಪರಮೇಶ್ವರ ಉಡುಪಿಗೆ ಬಡ್ತಿ

ಪರಮೇಶ್ವರ ಅನಂತ ಹೆಗ್ಡೆ ಅವರನ್ನು ಉಡುಪಿಯ ಎರಡನೆಯ ಹೆಚ್ಚುವರಿ ಪೋಲೀಸು ಆಯುಕ್ತರಾಗಿ ನೇಮಕ ಮಾಡಲಾಗಿದೆ.ಮಂಗಳೂರಿನ ಸಿಸಿಬಿ- ಅಪರಾಧ ಪತ್ತೆ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಪರಮೇಶ್ವರ ಅವರಿಗೆ ಬಡ್ತಿ ಸಿಕ್ಕಿದೆ.1994ರಲ್ಲಿ ಎಸ್‌ಐ ಆಗಿ ಪರಮೇಶ್ವರ ಅವರು ಪೋಲೀಸು ಇಲಾಖೆಗೆ ಸೇರಿದ್ದರು. ಉಡುಪಿಯಲ್ಲಿ ಈಗಾಗಲೇ ಒಬ್ಬರು ಹೆಚ್ಚುವರಿ ಪೋಲೀಸು ಕಮಿಶನರ್ ಇದ್ದು, ಎರಡನೆಯ ಹೆಚ್ಚುವರಿ ಪೋಲೀಸು ಕಮಿಶನರ್ ಆಗಿ ಪರಮೇಶ್ವರ ಅವರು ಸೇರ್ಪಡೆ ಆಗಿದ್ದಾರೆ.

ಹಾಸನ ; ಅಪಹರಣ ಮಾಡಿದವರಿಂದ ಶಿಕ್ಷಕಿ ಅರ್ಪಿತ ಬಿಡುಗಡೆ

ಹಾಸನದಲ್ಲಿ ನಿನ್ನೆ ಕಾಸಗಿ ಶಾಲೆಯ ಶಿಕ್ಷಕಿಯನ್ನು ಅಪಹರಿಸಿದ್ದ ತಂಡವನ್ನು ಬೆನ್ನಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಅಡ್ಡ ಹಾಕಿದ ಪೋಲೀಸರು ಶಿಕ್ಷಕಿ ಅರ್ಪಿತಳನ್ನು ಗಂಡಾಂತರದಿಂದ ಪಾರು ಮಾಡಿದರು. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಅರ್ಪಿತ ಟೀಚರಾಗಿ ದುಡಿಯುತ್ತಿದ್ದಳು. ಸಂಬಂಧಿಕರಾದ ರಾಮು ಮನೆಯವರು ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ರಾಪ ಮುಂದಿಟ್ಟಿದ್ದರು. ಆದರೆ ಅರ್ಪಿತ ಒಪ್ಪಿರಲಿಲ್ಲ. ಆದ್ದರಿಂದ ರಾಮು ಮತ್ತು ತಂಡದವರು ಆಕೆಯನ್ನು ಶಾಲೆಯ

ಪುತ್ತೂರಿನ ಜೋಸ್ ಆಲುಕಾಸ್ ಗೆ ಐದನೇ ವರ್ಷದ ಸಂಭ್ರಮ

ಜೋಸ್ ಆಲುಕಾಸ್… ಚಿನ್ನಾಭರಣ ಸಂಸ್ಥೆಗಳ ಪೈಕಿ ಹೆಸರುವಾಸಿಯಾಗಿರುವ ಪ್ರತಿಷ್ಟಿತ ಅಂತರಾಷ್ಟ್ರೀಯ ಚಿನ್ನಾಭರಣ ಮಳಿಗೆ.. ಪುತ್ತೂರಿನ ಕೆಎಸ್ ಆರ್ ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸ್ತಾ ಇರೋ ಈ ಸಂಸ್ಥೆ ಈಗಾಗಲೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿದ್ದು ಇದೀಗ ಸಂಸ್ಥೆಗೆ 5ವರ್ಷಗಳ ಸಂಭ್ರಮಾಚರಣೆ.‌ ಹಾಗಾಗಿ ಮಳಿಗೆಯಲ್ಲಿ ಡಿ.2ರಿಂದ ಸುವರ್ಣ ವರ್ಷ @5 ವಾರ್ಷಿಕ ಆಚರಣೆಗಳು ಪ್ರಾರಂಭವಾಗಲಿದೆ.. ಈ ಸಂಭ್ರಮಾಚರಣೆಯ ಪ್ರಯುಕ್ತ ರೂ. 50000

ಡಿ.3ರಂದು ಪುತ್ತೂರಿನಲ್ಲಿ ‘ನಾರಿ ಶಕ್ತಿ ಸಂಗಮ’

ಮಹಿಳಾ ಸಮನ್ವಯ ಪುತ್ತೂರು ಜಿಲ್ಲೆ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹಯೋಗದಲ್ಲಿ ‘ನಾರೀ ಶಕ್ತಿ ಸಂಗಮ’ ಇದೇ ಡಿಸೆಂಬರ್ 3ರಂದು ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯದ ಸಂಚಾಲಕಿ ರೂಪಲೇಖ ಹೇಳಿದ್ರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವ್ರು, ‘ನಾರಿ ಶಕ್ತಿ ಸಂಗಮ’ ಸಮ್ಮೇಳನವನ್ನ ಮುಖ್ಯವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗಿದೆ. ಸುಮಾರು 1000

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ

ವಿಟ್ಲ: ಚಾಲಕನ ನಿಯಂತ್ರ ತಪ್ಪಿ ಕೋಳಿ ಸಾಗಾಟದ ಲಾರಿ ಪಲ್ಟಿ

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕೋಳಿ ಸಾಗಾಟದ ಲಾರಿ ರಸ್ತೆಗೆ ಪಲ್ಟಿ ಹೊಡೆದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ರಾಧಾಕಟ್ಟೆ ಎಂಬಲ್ಲಿ ನಡೆದಿದೆ.ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಚಲಿಸುತ್ತಿದ್ದ ರಸ್ತೆಗೆ ಉರುಳಿದೆ. ಘಟನೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕೋಳಿಗಳು ರಸ್ತೆಗೆ ಉರುಳಿ ಬಿದ್ದಿದ್ದು, ಅದನ್ನು ಬೇರೆ ವಾಹನಕ್ಕೆ ತುಂಬಿಸಲಾಗಿದೆ.