Home Archive by category karavali (Page 13)

ಮೂಡುಬಿದಿರೆ:ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಟರ್ ಬೆಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಇದರ ಜನ ಮಂಗಳ ಕಾರ್ಯಕ್ರಮ ದಡಿಯಲ್ಲಿ ಕಡಂದಲೆ ಗ್ರಾಮದ ವಿಕಲಚೇತನ ಕೀರ್ತಿಕಾ ಅವರಿಗೆ ವಾಟರ್ ಬೆಡ್ ನ್ನು ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ವಿತರಿಸಿದರು.ಒಕ್ಕೂಟದ ಪದಾಧಿಕಾರಿ ಸುಶೀಲ ಹಾಗೂ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಹಾಗೂ ಸೇವಾಪ್ರತಿನಿಧಿ ವಸಂತಿ ಈ

ಭಾರತದಲ್ಲಿ ಆನ್‍ಲೈನ್ ಗೇಮಿಂಗ್,ಪ್ರತಿ ವರುಷ 20,000 ಕೋಟಿ ನಷ್ಟ

ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆದಿದ್ದು, ಹಲವರು ಸಾಲಗಾರರಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ತಾಳಲಾಗದೆ ಆತ್ಮಹತ್ಯೆ

ರಾಜಧಾನಿ ಇಲ್ಲದ ದೇಶ ಯಾವುದು?

ಶಾಂತ ಮಹಾಸಾಗರದ ನವುರು ದೇಶವು ಅಧಿಕೃತ ರಾಜಧಾನಿ ನಗರ ಹೊಂದಿಲ್ಲ; ಯೇರೆನ್ ಜಿಲ್ಲೆಯಿಂದ ಆಡಳಿತ ನಡೆಸಲಾಗುತ್ತದೆ. 21 ಚದರ ಕಿಲೋಮೀಟರ್ ವಿಸ್ತೀರ್ಣದ ನವುರು ದೇಶವು ಜಗತ್ತಿನ ಮೂರನೆಯ ಅತಿ ಪುಟ್ಟ ದೇಶವಾಗಿದೆ. ಜನಸಂಖ್ಯೆ ರೀತಿಯಲ್ಲಿ ಎರಡನೆಯ ಸ್ಥಾನದಲ್ಲಿರುವ ಈ ದೇಶದಲ್ಲಿ 12,000 ಜನರು ಇದ್ದಾರೆ. ಸರಕಾರಿ ಕಚೇರಿಗಳು, ಅಧ್ಯಕ್ಷರ ನಿವಾಸ, ಸಂಸತ್ತು ಎಲ್ಲವೂ ಯೇರೆನ್ ಜಿಲ್ಲೆಯಲ್ಲಿ ಇದ್ದು, ಅದು ಆಡಳಿತ ಕೇಂದ್ರ ಎನಿಸಿದೆ. ಈ ಪುಟ್ಟ ದ್ವೀಪ ದೇಶವನ್ನು ಹಿಂದೆ

ಸುಳ್ಯ:ಮನೆಗೆ ನುಗ್ಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಓರ್ವ ವಶಕ್ಕೆ

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ವಾಸವಾಗಿರುವ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ವರದಿಯಾಗಿದೆ.ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಹಲ್ಲೆಗೊಳಗಾದ ಯುವಕ. ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು ತಲ್ವಾರು ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ತಲೆಯ ಭಾಗಕ್ಕೆ ಏಟಾಗಿದ್ದು ಪುನೀತ್

ದಿಲ್ಲಿ ಮುಖ್ಯಮಂತ್ರಿಯ ಕೆನ್ನೆಗೆ ಏಟು.ಸಭೆಯಲ್ಲಿ ರೇಖಾ ಗುಪ್ತ ಮೇಲೆ ಹಲ್ಲೆದಾಳಿಕೋರನನ್ನು ಬಂಧಿಸಿದ ಪೋಲೀಸರು

ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ

ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್ ರಫ್ತುವ್ಯವಹಾರ 10 ಕೋಟಿ ಡಾಲರ್‌ನಷ್ಟು ಇರುತ್ತದೆ. ಹಂಗೆರಿ ದೇಶವು ಎರಡನೆಯ ಸ್ಥಾನದಲ್ಲಿದೆ. ಇದು

ಅತಿ ಕಡಿಮೆ ಹಣ ಮೌಲ್ಯ ಹೊಂದಿರುವ ಐದು ದೇಶಗಳು

ಕೆಲವು ದೇಶಗಳ ಹಣ ಮೌಲ್ಯ ಜಾಗತಿಕವಾಗಿ ತಳಮಟ್ಟದಲ್ಲಿ ಇವೆ. ನಮ್ಮ ಒಂದು ಕಟ್ಟು ನೋಟಿಗೆ ಇಲ್ಲಿ ನೂರಾರು ಕಟ್ಟು ನೋಟು ಸಿಗುತ್ತದೆ.ಭಾರತೀಯ ಮಧ್ಯಮ ವರ್ಗದ ಬಡವರು ಈ ದೇಶಗಳ ತಾರಾ ಹೋಟೆಲುಗಳಲ್ಲಿ ತಂಗಬಹುದು. ಭಾರತದ ಒಂದು ರೂಪಾಯಿಗೆ ಆ ದೇಶಗಳ ಹಣ ಎಷ್ಟು ಸಿಗುತ್ತದೆ ಎಂದರೆ ಕಟ್ಟು ಕಟ್ಟು. ಇರಾನಿನ ರಿಯಲ್ ನಮ್ಮ ಒಂದು ರೂಪಾಯಿಗೆ 490; ವಿಯೆಟ್ನಾಮಿನ ಡಾಂಗ್ ನಮ್ಮ ಒಂದು ರೂಪಾಯಿಗೆ 300; ಲಾವೋಸ್‌ನ ಕಿಪ್ ನಮ್ಮ ಒಂದು ರೂಪಾಯಿಗೆ 250,ಇಂಡೋನೇಶಿಯಾದ ರುಪೈಯ ನಮ್ಮ

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ