ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ನಡೆಯುತ್ತಿರುವ ತಲಪಾಡಿಯಲ್ಲಿ ನಿರ್ಮಿಸಲಾದ ಪ್ರಧಾನ ರಸ್ತೆಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ತಲಪಾಡಿಯಿಂದ ತೂಮಿನಾಡು ತನಕ ಇರುವ 1 ಕಿ.ಲೋ. ಮೀಟರ್ ರಸ್ತೆಯನ್ನು ಬಿಟ್ಟು ಕೊಡಲಾಗಿದೆ. 21 ಮೀಟರ್ ಅಗಲದಲ್ಲಿ ನಿರ್ಮಿಸಲಾಗುತ್ತಿರುವ ಆರು ಪಥದ ರಸ್ತೆಯ 8 ಮೀಟರ್ ಬರುವ ಮಾರ್ಗವನ್ನು ಸಂಚಾರ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ನಡೆಯುತ್ತಿರುವ ತಲಪಾಡಿಯಲ್ಲಿ ನಿರ್ಮಿಸಲಾದ ಪ್ರಧಾನ ರಸ್ತೆಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ತಲಪಾಡಿಯಿಂದ ತೂಮಿನಾಡು ತನಕ ಇರುವ 1 ಕಿ.ಲೋ. ಮೀಟರ್ ರಸ್ತೆಯನ್ನು ಬಿಟ್ಟು ಕೊಡಲಾಗಿದೆ. 21 ಮೀಟರ್ ಅಗಲದಲ್ಲಿ ನಿರ್ಮಿಸಲಾಗುತ್ತಿರುವ ಆರು ಪಥದ ರಸ್ತೆಯ 8 ಮೀಟರ್ ಬರುವ ಮಾರ್ಗವನ್ನು ಸಂಚಾರ ನಡೆಸಲು ವಾಹನಗಳಿಗೆ ಬಿಟ್ಟು ಕೊಡಲಾಗಿದೆ. ಸಂಚಾರ ಈಗ ಹೊಸ ರಸ್ತೆಯಲ್ಲಾಗಿರುವ ಕಾರಣ ಹಳೆಯ
ಮಂಗಲ್ಪಾಡಿ ಪಂ. 11 ನೇ ವಾರ್ಡು ಹೇರೂರು ಬಯಲು ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಗೆ ಮುಂಚಿತವಾಗಿ ಪಂ. ವತಿಯಿಂದ ಈ ಕಾಲು ದಾರಿಯನ್ನು ನಿರ್ಮಿಸಲಾಗಿತ್ತು.ಬದಿಯಾರ್- ಕಳಾಯಿ ಬಯಲು ಪ್ರದೇಶದಿಂದ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಈ ಕಾಲು ದಾರಿಯನ್ನು ಆಶ್ರಯಿಸುತಿದ್ದಾರೆ. ಸುಮಾರು 70 ಮೀಟರ್ ಉದ್ದ ಹಾಗೂ 6 ಫೀಟ್ ಅಗಲದಲ್ಲಿ ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ ಕೆಂಪು ಕಲ್ಲಿನಿಂದ ಈ ಕಾಲು ದಾರಿಯನ್ನು ನಿರ್ಮಿಸಲಾಗಿತ್ತೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಂಜೇಶ್ವರ: ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ವಿದ್ಯಾಭ್ಯಾಸ, ಆಸ್ಪತ್ರೆ ಹಾಗೂ ಹೆಣ್ಣು ಮಕ್ಕಳ ಮದುವೆ ಮೊದಲಾದ ಕ್ಷೇತ್ರಗಳಲ್ಲಿ ಅವರಿಗೆ ಬೇಕಾದ ಸಹಾಯ ಸಹಕಾರವನ್ನು ನೀಡುವ ಉದ್ದೇಶದಿಂದ 2020 ರಲ್ಲಿ ವಾಟ್ಸಪ್ ಮೂಲಕ ರೂಪೀಕೃತಗೊಂಡ ಮಂಜೇಶ್ವರ ಲೈಫ್ ಲಾಂಗ್ ಚ್ಯಾರಿಟಿಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಬುಧವಾರದಂದು ಮಂಜೇಶ್ವರದ ಹೃದಯ ಭಾಗದಲ್ಲಿರುವ ಹೊಸಂಗಡಿ ಗ್ರ್ಯಾಂಡ್ ಅಡಿಟೋರಿಯಂ ನಲ್ಲಿ ಭಾರೀ ವಿಜ್ರಂಭಣೆಯಿಂದ ನಡೆಯಿತು.
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಮಂಜೇಶ್ವರ ಮಂಡಲದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂದರ್ಶನ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಇತರ ಜನಪ್ರತಿನಿಧಿಗಳು ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಈ ಸಂದರ್ಭ ಹಾಜರಿದ್ದರು. ಎರಡೂ ಬದಿಯ ಸಂಪರ್ಕವನ್ನು ಬೇರ್ಪಡಿಸಿ ಮಾಡುತ್ತಿರುವಂತಹ ಈ ಕಾಮಗಾರಿಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಮಂಜೇಶ್ವರ: : ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಜೇಶ್ವರ ತಾಲೂಕಿನಾಧ್ಯಂತ ಸಂಭ್ರಮ, ಸಡಗರದಿಂದ ಮಂಗಳವಾರ ಆಚರಿಸಲಾಯಿತು.ಕುಂಜತ್ತೂರು ಹಳೆಯ ಆರ್ ಟಿ ಒ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಸ್ಜಿದ್ ನೂರ್ ಮಸೀದಿಯಲ್ಲಿ ಹನೀಸ್ ಮದನಿಯವರ ನೇತೃತ್ವದಲ್ಲಿ ಈದ್ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು. ಪವಿತ್ರ ರಮ್ಜಾನ್ ತಿಂಗಳ 30 ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ, ಯಾವುದೇ ಕೆಡುಕಿಗೆ ಆಸ್ಪದ
ಮಂಜೇಶ್ವರ: ಮಂಜೇಶ್ವರ ಗ್ರಾ. ಪಂಚಾಯತಿನ ಏಳನೇ ವಾರ್ಡು ವ್ಯಾಪ್ತಿಯಲ್ಲಿ ಇಪ್ಪತ್ತೈದು ವರ್ಷ ಹಳೆಯದಾಗಿರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸೆಂಟರ್ ಕ್ರಮ ಸಂಖ್ಯೆ 9 ರ ಅಂಗನವಾಡಿಯೊಂದು ಇದೀಗ ಕುಸಿದು ಬೀಳುವ ಭೀತಿಯನ್ನು ಎದುರಿಸುತ್ತಿದ್ದು, ಸ್ಥಳೀಯರು ಅದೆಷ್ಟು ಸಲ ಈ ಬಗ್ಗೆ ಅಧಿಕೃತರ ಗಮನಕ್ಕೆ ತಂದಿದ್ದರೂ ಯಾರು ಇತ್ತ ಕಡೆ ಗಮನ ಹರಿಸಿಲ್ಲ ವೆಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಂಜೇಶ್ವರ ಸ್ಥಾಪನೆಯಾಗುವ ಸಂದರ್ಭ ಸ್ಥಾಪಿಸಲಾದ ಮೊದಲ
ಮಂಜೇಶ್ವರ: ನೆರೆ ರಾಜ್ಯವಾದ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಸೀದಿ ಮಂದಿರಗಳ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮು ವೈಷಮ್ಯ ಹೊಗೆಯಾಡುತ್ತಿರುವಾಗಲೂ ಗಡಿ ಪ್ರದೇಶವಾದ ಮಂಜೇಶ್ವರಕ್ಕೆ ಸಮೀಪದ ಉದ್ಯಾವರದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಪಾತ್ರಿಗಳು, ಕ್ಷೇತ್ರ ಪದಾಧಿಕಾರಿಗಳು ಹಾಗೂ ಗುರಿಕ್ಕಾರರು ಉದ್ಯಾವರ ಸಾವಿರ ಜಮಾಹತಿಗೆ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನವನ್ನು ನೀಡಲಾಯಿತು. ಕಳೆದ ಕೆಲ ದಿನಗಳ ಹಿಂದೆ ಮೊದಲು ಇದೇ ಕ್ಷೇತ್ರದಲ್ಲಿ ಅರಸು
ಮಂಜೇಶ್ವರ : ದೇಶ ವ್ಯಾಪಕವಾಗಿ ಆರ್ಎಸ್ಎಸ್ನ ಭಯೋತ್ಪಾದನೆಯನ್ನು ಸಂವಿಧಾನ ಬದ್ಧವಾಗಿ ತಡೆಯ ಬೇಕಿದೆಯೆಂದು ಎಸ್.ಡಿ.ಪಿ.ಐ. ರಾಮನವಮಿ ಹಬ್ಬದ ಹೆಸರಲ್ಲಿ ಸುಮಾರು 14 ರಾಜ್ಯಗಳಲ್ಲಿ ನಡೆದ ಹಿಂಸಾಚಾರಗಳು ಆಕಸ್ಮಿಕವೋ ಕಾಕತಾಳಿಯವೋ ಅಲ್ಲ. ಪೂರ್ವನಿಯೋಜಿತ ಷಡ್ಯಂತ್ರವಾಗಿದೆ ಎಂದು ಎಸ್.ಡಿ.ಪಿ.ಐ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಆರೋಪಿಸಿದರು. “ಆರ್ಎಸ್ ಎಸ್ ನ ಮುಸ್ಲಿಂ ಜನಾಂಗೀಯ ಆಕ್ರಮಣಗಳನ್ನು ತಡೆಯಿರಿ ಹಾಗೂ ದೇಶವನ್ನು
ಮಂಜೇಶ್ವರ:-ರಿಧಂ ಕಲ್ಚರಲ್ ವಿಂಗ್ಸ್ ವತಿಯಿಂದ ಕಲೆಯನ್ನು ನಂಬಿ ಬದುಕುವ ಬಡಕಲಾವಿದರಿಗೆ ಸ್ನೇಹಸೌಹಾರ್ಧತೆಯ ಮೂಲಕ ವಿಷು ಮತ್ತು ರಂಝಾನ್ ಹಬ್ಬದ ಪ್ರಯುಕ್ತ ಕಿಟ್ ವಿತರಣೆ ನಡೆಲಾಯಿತು. ಬಡಕುಟುಂಬಗಳನ್ನು ಗುರುತಿಸಿ ಮನೆಮನೆಗಳಿಗೆ ಕಿಟ್ ವಿತರಣೆ ಮಾಡಿ ,ಜನಸೇವಾ ಯೋಜನೆಯ ಮೂಲಕ ಸೌಹಾರ್ದತೆಯನ್ನು ಬೆಳೆಸಿದೆ. ಈಗ ತಾನೇ ಕಾರ್ಯಕ್ರಮಗಳು ಪ್ರಾರಂಭವಾದರೂ ಅನಾರೋಗ್ಯದ ಪರ ಮನೆಯಲ್ಲಿಯೇ ಬಡತನದ ಬೇಗೆಯ ಮನಗಂಡು ಸ್ವಲ್ಪವಾದರೂ ಸಹಾಯ ಮಾಡಲು ಹೊರಟಿರುವ ರಿಧಂ ಕಲ್ಚರಲ್