ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದಲ್ಲಿ “ಬದುಕು ಕಟ್ಟೋಣ ಬನ್ನಿ” ತಂಡದಿಂದ ಪುನರ್ ನಿರ್ಮಾಣಗೊಂಡ 12 ಮನೆಗಳ ಗೃಹ ಪ್ರವೇಶ ಕಾರ್ಯಕ್ರಮ ಕೊಳಂಬೆಯಲ್ಲಿ ನಡೆಯಿತು. ಹಲವಾರು ಸಂಘ ಸಂಸ್ಥೆಗಳೊಡನೆ ಸೇರಿ ಸುಮಾರು 12 ಮನೆಗಳನ್ನು ನಿರ್ಮಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಬದುಕು ಕಟ್ಟೋಣ ತಂಡದ ರೂವಾರಿಗಳಾದ
ಕಡಬ ತಾಲೂಕಿನ ಗೊಳಿತೊಟ್ಟು ಅರಂತ ಬೈಲು ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸರಕಾರಿಭೂಮಿಯ ಮಣ್ಣನ್ನು ಬೇರೆಯವರಿಗೆ ಮಾರಿದ್ದು ಇದರ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆರಂತ ಬೈಲು ಮಹೇಶ್ ಪೂಜಾರಿ ಎಂಬ ವ್ಯಕ್ತಿ ಸರ್ವೇ ನಂ 93/5 3ರ ಸರಕಾರಿ ಭೂಮಿಯ 1ಎಕರೆ ಮಣ್ಣನ್ನು ಕಂದಾಯ ಇಲಾಖೆಯ ಯಾವುದೇ ಒಪ್ಪಿಗೆ ಇಲ್ಲದೆ ಮಾರಿದ್ದಾರೆ, ಅಲ್ಲದೆ ಆಲಂತಾಯ ಅರಂತ ಬೈಲು ಸಾರ್ವಜನಿಕ ರಸ್ತೆಯನ್ನು ಅಗೆದು ಹಾನಿ ಮಾಡಿದ್ದಾರೆ. ಈ ಬಗ್ಗೆ
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗುರಿಪಲ್ಲ ರಸ್ತೆಯ ಹಲಕ್ಕೆ ಎಂಬಲ್ಲಿ ನಿವೇಶನದ ವಿಚಾರವಾಗಿ ಗಲಾಟೆ ಮಾಡಲು ಬಂದ ದುಷ್ಕರ್ಮಿಗಳ ಗುಂಪು ಸಾರ್ವಜನಿಕರು ಓಡಾಡುವ ನಡು ರಸ್ತೆಯಲ್ಲಿಯೇ ಸಾರ್ವಜನಿಕರ ಎದುರು ಓರ್ವ ಯುವತಿಯ ಬಟ್ಟೆಯನ್ನು ಹರಿದು ಎಳೆದು ಬೆತ್ತಲೆ ಗೊಳಿಸಿ ಅವಮಾನಿಸಿ ರುವುದು ಖಂಡನೀಯ ಎಂದು ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ವಸಂತ ಬಂಗೇರಾ ರವರು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಇದರ ಬಗ್ಗೆ ದೂರು ಕೊಟ್ಟರೂ
ಬೆಳ್ತಂಗಡಿ ತಾಲೂಕಿನ ಉಜಿರೆಯ ಗುರಿಪಳ್ಳದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಇಂದು ಅನಿರ್ಧಿಷ್ಟವಾದಿ ಪ್ರತಿಭಟನಾ ಧರಣಿ ಇಂದು ಆರಂಭಗೊಂಡಿತು.ಪ್ರತಿಭಟನಗಾರರನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಬೆಳ್ತಂಗಡಿ ಅವರು , ಪ್ರಕರಣದ ಪ್ರಮುಖ ಆರೋಪಿಗಳನ್ನು ಬಚಾವ್ ಮಾಡಲು ಸ್ಥಳೀಯ ಶಾಸಕರು
ಉಜಿರೆಯಲ್ಲಿ ಕೆಲವು ಪುಂಡರು ಉಜಿರೆ-ಗುರಿಪಳ್ಳ ರಸ್ತೆಯಲ್ಲೇ ಹತ್ತೈವತ್ತು ಜನರ ಎದುರು ದಲಿತಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯೋರ್ವಳ ಉಡುಪು ಪೂರ್ತಿ ಹರಿದು, ಪೂರ್ಣ ಬೆತ್ತಲೆ ಗೊಳಿಸಿಮಹಿಳಾ ದೌರ್ಜನ್ಯ, ಮಾನಹಾನಿ, ಅವಮಾನ ಮಾಡಿದ್ದಲ ್ಲದೆ, ಜೀವ ಬೆದರಿಕೆ, ಹಲ್ಲೆ ನಡೆಸಿದ ಬಗ್ಗೆದೌರ್ಜನ್ಯಕ್ಕೆ ಒಳಗಾದ ಮಹಿಳೆ ಆರೋಪಿಗಳಾದ ಸಂದೀಪ್, ಸಂತೋಷ್, ಗುಲಾಬಿ, ಸುಗುಣ, ಕುಸುಮ,ಲೋಕಯ್ಯ, ಅನಿಲ್, ಲಲಿತ, ಚನ್ನಕೇಶವ ಮೊದಲಾದವರ ಮೇಲೆ ಬೆಳ್ತಂಗಡಿ ಪೋಲೀಸರಿಗೆ
ಸತ್ಯಶಾಂತ ಪ್ರತಿಷ್ಠಾನ ವತಿಯಿಂದ ಭಗವದ್ಗೀತಾ ವಿಶ್ವ ವೈಭವ ಕಾರ್ಯಕ್ರಮವು ಶ್ರೀಮತಿ ಶಾಂತಾ ಕುಂಟಿನಿ ಇವರ ಸಾರಥ್ಯದಲ್ಲಿ ಉಪ್ಪಿನಂಗಡಿಯ ಶಾಂತಾ ಸಭಾ ಭವನದಲ್ಲಿ ಜರುಗಿತು. ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತಿಗೆ ಸಂಸ್ಕ್ರತಿ ಯನ್ನು ಪರಿಚಯಿಸಿದ ದೇಶ ಭಾರತ ಎಂದರು. ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಅರ್ಚಕರಾದಹರೀಶ್ ಉಪಾಧ್ಯಾಯ ದೀಪ ಪ್ರಜ್ವಲನೆ ಮಾಡಿದರು.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದಿನೇಶ್ ಪರಿಶಿಷ್ಟ ಪಂಗಡದ ಮರಾಠಿ ಸಮುದಾಯದ ವ್ಯಕ್ತಿಯನ್ನು ಕೃಷ್ಣ ನಾಯಾರ್ ದಿನಾಂಕ ಪೆಬ್ರವರಿ 25 ರಂದು ಕೊಲೆ ಮಾಡಿದ್ದಾನೆ.ದಿನೇಶ್ ರವರ ಕುಟುಂಬಕ್ಕೆ ರಕ್ಷಣೆ ಹಾಗೂ ಪರಿಹಾರ ಗೋಸ್ಕರ ಸರ್ಕಾರವನ್ನು ಬಿಎಸ್ಪಿ ಆಗ್ರಹಿಸಲಾಯಿತು. ದಿನಾಂಕ 27/2/2022 ರಂದು ಬಿಎಸ್ಪಿ ನಿಯೋಗ ದಿನೇಶ್ ರವರ ಮನೆಗೆ ಬೇಟಿ ನೀಡಲಾಯಿತು ಈ ನಿಯೋಗದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ .ಎಚ್. ಚೆನ್ನಕೇಶವ
ಕ್ಷುಲ್ಲಕ ಕಾರಣಕ್ಕಾಗಿ ಧರ್ಮಸ್ಥಳ ಠಾಣಾ ವ್ಯಾಪ್ತಿಯ ದಿನೇಶ್ ಎಂಬ ದಲಿತ ಯುವಕನಿಗೆ ಸ್ಥಳೀಯ ಕೃಷ್ಣ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ದಿನೇಶ್ ಎಂಬವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ಧರ್ಮಸ್ಥಳದಲ್ಲಿ ದಿನೇಶ್ ಎಂಬ ದಲಿತ ಸಮುದಾಯದ ಯುವಕನನ್ನು
ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸಿ ವಿವಿಧ ಬಗೆಯ ಪ್ರಯೋಗಗಳನ್ನು ನಡೆಸಲು ಪ್ರೇರಣೆ ನೀಡುವ ಉದ್ದೇಶದಿಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರೂಪಿಸಿದ ‘ಲ್ಯಾಬ್ ಇನ್ ಕ್ಯಾಬ್’ ಯೋಜನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಫೆ.10ರಂದು ಧರ್ಮಸ್ಥಳದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.ಈ ಯೋಜನೆಯಡಿ
ಉಜಿರೆ: ಗ್ರಾಮೀಣ ಬದುಕಿನ ಆಳಕ್ಕೆ ಇಳಿದಾಗ ಮಾತ್ರ ಗ್ರಾಮೀಣ ವರದಿಗಾರಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮೀಣ ವರದಿಗಾರಿಕೆಯ ಕುರಿತು ಉಪನ್ಯಾಸ ನೀಡಿದರು. ಗ್ರಾಮೀಣ ಜಗತ್ತು ತನ್ನೊಳಗೆ ಹಲವಾರು ವಿಷಯಗಳನ್ನು