ರಾಮನಗರದ ಅಂಬೇಡ್ಕರ್ ಭವನದಲ್ಲಿ ಸಂಭ್ರಮದ ಸ್ವತಂತ್ರೋತ್ಸವ ಆಚರಣೆ

ಸ್ವತಂತ್ರೋತ್ಸವದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಮನಗರ ಮತ್ತು ಫ್ರೆಂಡ್ಸ್ ರಾಮನಗರ ವತಿಯಿಂದ ರಾಮನಗರದ ಅಂಬೇಡ್ಕರ್ ಭವನದಲ್ಲಿ ಸಂಭ್ರಮದ ಸ್ವತಂತ್ರೋತ್ಸವ ಆಚರಿಸಲಾಯಿತು.
ಗ್ರಾಮ ಪಂಚಾಯತಿ ನೌಕರನಾಗಿದ್ದು ಇತ್ತೀಚೆಗೆ ನಿವೃತ್ತಿ ಹೊಂದಿರುವ ಹಿರಿಯ ಸಾಮಾಜಿಕ ಹೋರಾಟಗಾರ ದಲಿತ ಹೋರಾಟಗಾರ ಮಾಧವ ಪಡುಕೋಣೆ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಂಘರ್ಷ ಸಮಿತಿಯ ಸಂಘಟನ ಸಂಚಾಲಕರಾಗಿರುವ ಸತೀಶ್ ಕೆ ರಾಮನಗರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ನಾಡ ದಲಿತ ಮುಖಂಡರಾದ ಕೃಷ್ಣ ನಾಡ ಹೆರಿಯ ಸೇನಾಪುರ ಸತೀಶ್ ಕಾಂಚನ್ ಬಡಾಬೈಲ್ ಬಾಬು ದೇವಾಡಿಗ ಶಿವಾನಂದ ಭಂಡಾರಿ ರಿತೇಶ್ ಗಾಣಿಗ ರಾಮಚಂದ್ರ ರಾಮನಗರ ರಾಮಚಂದ್ರ ಅಂಬೇಡ್ಕರ್ ನಗರ ಸುಧಾಕರ್ MTR ಸಂತೋಷ ಪೂಜಾರಿ ರಾಮನಗರ ಗುರುರಾಜ ಗಾಣಿಗ ರಾಮ ಸಂದೇಶ್ ನಾಗೇಶ್ ಮೊದಲದವರು ಉಪಸ್ಥಿತರಿದ್ದರು.
ಸುರೇಂದ್ರ ರಾಮನಗರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು.
