Home ಕರಾವಳಿ Archive by category ಉಡುಪಿ (Page 136)

ಪಡುಬಿದ್ರಿಯಲ್ಲಿ ಈದ್ ಮಿಲಾದ್ ಸಂಭ್ರಮ…

ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಕಂಚಿನಡ್ಕದಿಂದ ಆರಂಭಗೊಂಡ ಜಾಥದಲ್ಲಿ ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದು, ದ್ವಿಚಕ್ರ ವಾಹನ ಸಹಿತ ಅಟೋ ರಿಕ್ಷಾಗಳು ಈ ಜಾಥದಲ್ಲಿ ಪಾಲ್ಗೊಂಡಿದ್ದವು. ಈ ಬಗ್ಗೆ ಮಾಹಿತಿ ನೀಡಿದ ಉರ್ದು ಶಾಲಾ ಮುಖ್ಯ ಶಿಕ್ಷಕ ಶಫಿಯುಲ್ಲಾ ಎಂಬವರು, ಲೋಕಕ್ಕೆ ಒಳ್ಳೆಯ ವಿಚಾರಗಳನ್ನು ಸಾರಿದ ಪ್ರವಾದಿಯವರ ಜನ್ಮ ದಿನಾಚರಣೆಯನ್ನು ಪಡುಬಿದ್ರಿ ಜಮಾತ್ ಮುಖಾಂತರ ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ದಿನವೂ ಕಂಚಿನಡ್ಕದಿಂದ

ನವ ವಿವಾಹಿತೆ ಶವ ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆ

ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾದ ನವ ವಿವಾಹಿತೆಯ ಶವ ಮನೆಯ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆಮೃತ ನವವಿವಾಹಿತೆ ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ(24), ಈಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬುವರನ್ನು ಅಂತರ್ ಜಾತಿ ವಿವಾಹವಾಗಿದ್ದ ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸ ವಿದ್ದಳು, ಕಾಪುವಿನ ಮಹಾಬಲ ಮಾರ್ಲ್ ಕಟ್ಟಡದ ಪ್ಯಾನ್ಸಿ

ಬೈಂದೂರು ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಶರನ್ನವರಾತ್ರಿ ಉತ್ಸವ

ಬೈಂದೂರು ತಾಲೂಕಿನ ಸುಪ್ರಸಿದ್ಧ ದೇವಸ್ಥಾನ ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಇಂದು ವಿಜಯ ದಶಮಿ ಪ್ರಯುಕ್ತ ಮಂಜುನಾಥ್ ಅಡಿಗ ಬಡಾಕೆರೆ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಇಂದು ದೇವಿಯ ಸನ್ನಿಧಾನದಲ್ಲಿ ದುರ್ಗಾ ಹೋಮ ವಿಶೇಷ ಮಹಾಪೂಜೆ ಅನ್ನದಾನ ಸೇವೆ ಸಂಪನ್ನಗೊಂಡಿದೆ. ಸಂಜೆ 6:00 ರಿಂದ 8.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ ಬಡಾಕೆರೆ ಇವರಿಂದ ಭಜನಾ ಕಾರ್ಯಕ್ರಮವು ಅದ್ದೂರಿನಿಂದ ನಡೆದಿದೆ. ಈ ಸಂದರ್ಭದಲ್ಲಿ ಸಂತೋಷ್ ಮೊಗವೀರ

ಪಾಜಕಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮಧ್ವಜಯಂತಿ ಮಹೋತ್ಸವ

ಆಚಾರ್ಯ ಮಧ್ವರ ಅವತರ ಭೂಮಿಯಾದ ಪಾಜಕಕ್ಷೇತ್ರದಲ್ಲಿ ವಿಜಯದಶಮಿಯಂದು ಮಧ್ವಜಯಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಸೋದೆ ವಾದಿರಾಜ ಮಹಾಮುನಿಗಳಿಂದ ಪ್ರತಿಷ್ಠಿತ ಆಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆಗಳು ನಡೆದವು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಆಗಮಿಸಿದ ವಿವಿಧ ವಿದ್ವಾಂಸರು ಸರ್ವಮೂಲ ಪಾರಾಯಣ ಹಾಗೂ ಉಪನ್ಯಾಸಗಳನ್ನು

ಉಚ್ಚಿಲ ವೈಭವದ ದಸರಾ ಮೆರವಣಿಗೆ : ಹೆಲಿಕಾಪ್ಟರ್ ಮೂಲಕ ಶಾರದ ಮಾತೆಗೆ ಪುಷ್ಪರ್ಚನೆ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮತ್ತು ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ವೈಭವದ ದಸರಾ ಶೋಭಾ ಯಾತ್ರೆ ನಡೆಯಿತು. ಕ್ಷೇತ್ರದ ಪ್ರಧಾನ ತಂತ್ರಿ ವೇ.ಮೂ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ.ಮೂ. ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವೈಭವದ ದಸರಾ ಮೆರವಣಿಗೆಯಲ್ಲಿ ವಿವಿಧ ಬಗೆಯ ವೈವಿಧ್ಯಮಯ ಗಮನಸೆಳೆಯುತ್ತಿದ್ದು ಚಾಲನೆ ವೇಳೆ ಹೆಲಿಕಾಪ್ಟರ್ ಮೂಲಕ ನವ ದುರ್ಗೆಯರು

ಪಡುಬಿದ್ರಿ ಬಾಲ ಗಣಪನ ಭವ್ಯ ಶೋಭಾಯಾತ್ರೆ: ಎಲ್ಲೆಲ್ಲೋ ಭಜನಾ ನೃತ್ಯಗಳದ್ದೇ ಕಲರವ

ಎಲ್ಲಾ ಕಡೆ ವಿಜಯದಶಮಿಯಂದು ತಾಯಿ ಶಾರದೆಯ ವಿಜ್ರಂಃಣೆಯ ಶೋಭಾಯಾತ್ರೆಗಳು ನಡೆಯುತ್ತಿದ್ದರೆ ಪಡುಬಿದ್ರಿಯಲ್ಲಿ ಮಾತ್ರ ಬಾಲಗಣಪನ ಶೋಭಾಯಾತ್ರೆ ವಿವಿಧ ಧಾರ್ಮಿಕ ಚಿಂತನೆಯ ತಂಡಗಳಿಂದ ಭಜನಾ ಕುಣಿತಗಳು ಭಕ್ತ ಸಮೂಹವನ್ನು ಮಂತ್ರ ಮುಗ್ದರನ್ನಾಗಿಸಿದೆ. ಗುಡ್ಡಕ್ಕೆ ದನ ಕಾಯಲು ಹೋದ ಮಕ್ಕಳು ಸಮಯ ಕಳೆಯಲು ಆಟಕ್ಕಾಗಿ ಪ್ರತಿಷ್ಠೆ ಮಾಡಿದ ಗಣಪನೇ ಇಂದು ಗುಡ್ಡ ಗಣಪನಾಗಿಯೂ…ಮಕ್ಕಳು ಪೂಜಿಸಿದ್ದರಿಂದ ಬಾಲ ಗಣಪನಾಗಿಯೂ ಲಕ್ಷಾಂತರ ಭಕ್ತಾಧಿಗಳ ಕಷ್ಟ ಕಾರ್ಪಣ್ಯಗಳನ್ನು ದೂರ

ಬೈಂದೂರು :ಚಾಲಕ-ಮಾಲಕರ ಸಂಘದ ಉದ್ಘಾಟನಾ ಸಮಾರಂಭ

ಬೈಂದೂರು: ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.. ಉದ್ಘಾಟನಾ ಸಮಾರಂಭ ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಇವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ಆಶೀರ್ವಚನದಲ್ಲಿ ಸ್ವಾಮೀಜಿಗಳು ಕರ್ತವ್ಯವೇ ಪೂಜೆ ,ಸಾರ್ವಜನಿಕ ಸೇವೆಯೇ ಯಜ್ಞ ಯಾಗಾದಿಗಳು ಸಂಸ್ಥೆ ನೂರಾರು ವರ್ಷ ಉಳಿದು ಬೆಳೆದು ತನ್ನೆಲ್ಲ

ಕಾಪು ಶ್ರೀ ಜನಾರ್ದನ ದೇಗುಲ ಮತ್ತು ಮಾರಿಗುಡಿಗೆ ಮುತಾಲಿಕ್ ಭೇಟಿ

ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೋಮವಾರ ಸಾವಿರ ಸೀಮೆಯ ಒಡೆಯನ ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಶ್ರೀ ಹೊಸಮಾರಿ ಗುಡಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಶ್ರೀ ಜನಾರ್ದನ ದೇಗುಲದಲ್ಲಿ ವೇದಮೂರ್ತಿ ಜನಾರ್ಧನ ತಂತ್ರಿಯವರು ಶಾಲು ಹೊದಿಸಿ ಸನ್ಮಾನಿಸಿ ಪ್ರಸಾದ ವಿತರಿಸಿದರು. ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀನಿವಾಸ್ ತಂತ್ರಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀದೇವಿಯ ಪ್ರಸಾದ

ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತದಿಂದ ಅವಕಾಶ

ಮಲ್ಪೆ : ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತವು ಅವಕಾಶ ಕಲ್ಪಿಸಿದ್ದು, ಅದರಂತೆ ರವಿವಾರ ಜಲಸಾಹಸಗಳು ಆರಂಭಗೊಳ್ಳುವ ಮೂಲಕ ಮಲ್ಪೆ ಬೀಚ್‌ನಲ್ಲಿ ಚಟುವಟಿಕೆ ಗರಿಗೆದರಿವೆ. ಮಳೆಗಾಲದ ಹಿನ್ನೆಲೆಯಲ್ಲಿ 5 ತಿಂಗಳಿಂದ ಬೀಚ್‌ನಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸೆ. 15ಕ್ಕೆ ನಿಷೇಧದ ಅವಧಿ ಮುಗಿದರೂ ಪ್ರತಿಕೂಲ ಹವಾಮಾನದ ಕಾರಣ ಅವಕಾಶ ನೀಡಿರಲಿಲ್ಲ. ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ. ರವಿವಾರ