ಜಪಾನ್ ನೇತೃತ್ವದ ಪ್ರತಿನಿಧಿ ಮಂಡಳಿ ಕೊಡಿಯಾಲ್ ಬೈಲ್ನ ಶಾರದಾ ಕಚೇರಿಗೆ ಭೇಟಿ
ಜಪಾನ್ನ OHMOTO GUMI Co., Ltd. ಸಂಸ್ಥೆಯ ಅಧ್ಯಕ್ಷ ಮತ್ತು ಪ್ರತಿನಿಧಿ ನಿರ್ದೇಶಕರಾದ Keiichi Miyake ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಫೆಬ್ರವರಿ 5, 2026ರಂದು ಮಂಗಳೂರಿನ ಕೊಡಿಯಲ್ಬೈಲ್ನ ರಾಮಭವನ ಕಾಂಪ್ಲೆಕ್ಸ್ನಲ್ಲಿ ಇರುವ SHARADA ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು Er.ಮುಲ್ಕಿ ಜೀವನ್ ಕೆ. ಶೆಟ್ಟಿ ಅವರನ್ನು ಭೇಟಿ ಮಾಡಿ ಮಂಗಳೂರಿನ ನಿರ್ಮಾಣ ಚಟುವಟಿಕೆಗಳು, ಭಾರತ–ಜಪಾನ್ ನಡುವಿನ ತಾಂತ್ರಿಕ ಸಹಕಾರದ ಅವಕಾಶಗಳು ಹಾಗೂ ವಿದೇಶಿ ವ್ಯಾಪಾರದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಜೊತೆಗೆ ಜಪಾನಿನಲ್ಲಿ ಭಾರತೀಯ ಸಿವಿಲ್ ಎಂಜಿನಿಯರ್ಗಳಿಗೆ ಇರುವ ಉದ್ಯೋಗಾವಕಾಶಗಳ ಕುರಿತೂ ಮಾತುಕತೆ ನಡೆಯಿತು.

ಈ ಸಂದರ್ಭದಲ್ಲಿ ಜಪಾನ್ ಪ್ರತಿನಿಧಿ ಮಂಡಳಿ ಎರ್. ಮುಲ್ಕಿ ಜೀವನ್ ಕೆ. ಶೆಟ್ಟಿ ಅವರನ್ನು ಜಪಾನ್ಗೆ ಭೇಟಿ ನೀಡಿ ನಿರ್ಮಾಣ ಕ್ಷೇತ್ರದಲ್ಲಿ ಸಹಕಾರದ ಅವಕಾಶಗಳನ್ನು ಇನ್ನಷ್ಟು ಅನ್ವೇಷಿಸಲು ಹಾಗೂ ಪರಸ್ಪರ ವೃತ್ತಿಪರ ಸಂಬಂಧಗಳನ್ನು ಬಲಪಡಿಸಲು ಆಹ್ವಾನಿಸಿತು.
ಸಭೆಯಲ್ಲಿ ಪ್ರೊ. ಹರಿಕೃಷ್ಣ ಭಟ್, ಶ್ರೀ ಕೊಜಿ ಸಾಕಿಕವಾ, ಶ್ರೀ ಜುನಿಚಿ ಮತ್ಸುವೆ, ಶ್ರೀ ಟಕೆಹಿತೋ ನಂದಾ, ಶ್ರೀಮತಿ ಯಸುಕೋ ಸಾಟೋ, ಪ್ರೊ. ರಾಘವೇಂದ್ರ ಪೈ, Er.ಮಹೇಶ್ ಕಾಮತ್, ಶ್ರೀ ಗಣೇಶ್ ಉಡುಪ, Er.ಕಾರ್ತಿಕ್ ಶೆಟ್ಟಿ ಹಾಗೂ Er.ಕಿಶನ್ ಭಟ್ ಉಪಸ್ಥಿತರಿದ್ದರು.
ಈ ಭೇಟಿ ನಿರ್ಮಾಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರ, ಜ್ಞಾನ ವಿನಿಮಯ ಮತ್ತು ವೃತ್ತಿಪರ ಅವಕಾಶಗಳನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆಯಾಗಿದೆ.


















