ಮಣಿಪಾಲ: ಮಾಹೇ ವತಿಯಿಂದ ಸಸ್ಯಶ್ಯಾಮಲ: ಗಿಡ ನೆಡುವ ಕಾರ್ಯಕ್ರಮ

ಮಣಿಪಾಲ: ವಿಶ್ವವಿದ್ಯಾಲಯವಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸ್ವಯಂಸೇವಕ ಸಂಸ್ಥೆಯ ವತಿಯಿಂದ ಹಸಿರು ಉಪಕ್ರಮ “ಸಸ್ಯಶ್ಯಾಮಲ”ವನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿರುವ ೬ ನೇ ರಾಷ್ಟ್ರೀಯ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಕುರಿತ ಸಮ್ಮೇಳನಕ್ಕೆ ಅರ್ಥಪೂರ್ಣ ಮುನ್ನುಡಿಯಾಗಿ ಕಾರ್ಯನಿರ್ವಹಿಸಿತು.

ಈ ಕಾರ್ಯಕ್ರಮವು ಹೆಬ್ರಿ ಹೆದ್ದಾರಿಯಲ್ಲಿರುವ ಶಿವಪುರ ಗ್ರಾಮದಲ್ಲಿ 2ಕಿಲೋಮೀಟರ್ ರಸ್ತೆ ವಿಭಜಕಗಳ ಉದ್ದಕ್ಕೂ 600 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ 110 ಕ್ಕೂ ಹೆಚ್ಚು ಸಮರ್ಪಿತ ವಿದ್ಯಾರ್ಥಿ ಸ್ವಯಂಸೇವಕರನ್ನು ಒಟ್ಟುಗೂಡಿಸಿತು. ಈ ನಡುತೋಪು ಅಭಿಯಾನವು “ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯನ್ನು ಮುನ್ನಡೆಸುವುದು” ಎಂಬ ಸಮ್ಮೇಳನದ ಥೀಮ್ ಆಗಿದೆ.

ಮಾಹೆಯ ವಿಎಸ್‌ಒ ಮುಖ್ಯ ಸಂಯೋಜಕರಾದ ಡಾ. ಅಭಿಷೇಕ್ ಚತುರ್ವೇದಿ ಅವರು ವಿವಿಭ ವಿಭಾಗಗಳು ಮತ್ತು ಶೈಕ್ಷಣಿಕ ಹಂತಗಳ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡ ಸಮಗ್ರ ನಡುತೋಪು ಅಭಿಯಾನವನ್ನು ಸಂಯೋಜಿಸಿದರು.

Related Posts

Leave a Reply

Your email address will not be published.