Home Posts tagged #v4news karnataka (Page 105)

ಪಿಲಿಕುಳ‌ : ಇರುವೆಗಳಿಂದ ಹಾನಿಗೊಳಗಾಗಿದ್ದ ಹಾವು ಸುರಕ್ಷಿತ

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಹಾವೊಂದಕ್ಕೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಪಿಲಿಕುಳದ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದು, ‘ಇರುವೆಯ ಕಿರುಕುಳಕ್ಕೊಳಗಾಗಿದ್ದ ಹಾವು ಸುರಕ್ಷಿತವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಪಿಲಿಕುಳ‌

ಉತ್ತರಕಾಶಿ : ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತ

ಉತ್ತರಕಾಶಿಯಲ್ಲಿ ನಡೆದ ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.  ಹಿಮಪಾತ ಅಪಘಾತದ ಮೂರನೇ ದಿನ ಎಲ್ಲಾ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಈಗಾಗಲೇ  ರಕ್ಷಣಾ ತಂಡವು  19 ಪರ್ವತಾರೋಹಿಗಳ ಮೃತದೇಹಗಳನ್ನು ಹೊರತೆಗೆದಿದ್ದು ಇನ್ನುಳಿದವರ ಶೋಧ ಕಾರ್ಯ ಹೆಲಿಕಾಪ್ಟರ್‌ ಮೂಲಕ  ಮುಂದುವರಿದಿದೆ. ಹಿಮಪಾತದ ತೀವ್ರತೆಯಿಂದ  ಗುರುವಾರ ಮಧ್ಯಾಹ್ನದ ನಂತರ  ರಕ್ಷಣಾವನ್ನು

ತೊಕ್ಕೊಟ್ಟು-ಕಾಪಿಕಾಡ್ ಹೆದ್ದಾರಿಯಲ್ಲಿ ಅವೈಜ್ಞಾನಿಕ ಯೂಟರ್ನ್ : ಪ್ರತಿನಿತ್ಯ ಅಪಘಾತ – ಪ್ರಾಣ ಭಯದಲ್ಲಿ ಸ್ಥಳೀಯರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್‍ನಿಂದ ಕುಂಪಲ ಬೈಪಾಸ್ ತನಕ ಸರ್ವಿಸ್ ರಸ್ತೆಯನ್ನು ವಿಸ್ತರಿಸಬೇಕು. ಹಾಗೂ ಕಾಪಿಕಾಡ್ ಬಳಿ ಇರುವ ಅವೈಜ್ಞಾನಿಕ ಯೂಟರ್ನ್ ಓಪನ್ ರಸ್ತೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಜಿಲ್ಲಾಡಳಿತÀ ಹಾಗೂ ಹೆದ್ದಾರಿ ಇಲಾಖೆಗೆ ಮನವಿ ಮಾಡಿದೆ. ಮನವಿ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ

ಪಿಲಿಕುಳ ನಿಸರ್ಗಧಾಮ : ಹಾವಿನ ಕೋಣೆಯೊಂದರಲ್ಲಿ ಕಚ್ಚುವ ಇರುವೆ ಪ್ರತ್ಯಕ್ಷ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಹಾವೊಂದರ ಕೋಣೆ ತುಂಬಾ ಕಚ್ಚುವ ಇರುವೆಗಳು ಸೃಷ್ಠಿಯಾಗಿದ್ದು ಇದರಿಂದ ಹಾವು ನರಕ ಅನುಭವಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಲಿಕುಳ ನಿಸರ್ಗಧಾಮದಲ್ಲಿರುವ ಹಾವೊಂದು ಇರುವೆಗಳು ಕಚ್ಚಿ ನೋವನ್ನು ಅನುಭವಿಸುತ್ತಿರುವ ದೃಶ್ಯವನ್ನು ಪಿಲಿಕುಳಕ್ಕೆ ಭೇಟಿ ಕೊಟ್ಟ ಪ್ರವಾಸಿಗರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪಿಲಿಕುಳದಲ್ಲಿ ಪ್ರವಾಸಿಗರ ವೀಕ್ಷಣೆಗೆ

ಮಂಗಳೂರು : ದಸರಾ ಕವಿಗೋಷ್ಠಿಯಲ್ಲಿ ಮೊಳಗಿದ ಬಹು ಭಾಷಿಕತೆ

ಮಂಗಳೂರಿನ ತುಳು ಪರಿಷತ್ ,ಮಯೂರಿ ಫೌಂಡೇಷನ್ ಮತ್ತು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಸಾಮರಸ್ಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ದಸರಾ ಬಹು ಭಾಷಾ ಕವಿಗೋಷ್ಠಿ ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಯೂರಿ ಫೌಂಡೇಶನ್‍ನ ಅಧ್ಯಕ್ಷರು ಹಾಗೂ ಹಿರಿಯ ಕವಿ ಜಯ.ಕೆ.ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ತುಳುನಾಡಿನ ಎಲ್ಲಾ ಭಾಷಿಗರು ಒಂದೇ ವೇದಿಕೆಗೆ ಬರುವ ಮುಲಕ ತುಳುನಾಡಿನ

ನೊಂದವರ ಪಾಲಿನ ಆಶಾ ಕಿರಣ ಶಾರದಾ ಹುಲಿವೇಷ ತಂಡ

ಬದುಕಿನಲ್ಲಿ ನೋವುನ್ನುತ್ತಿರುವ ಅದೇಷ್ಟೋ ಕುಟುಂಬಗಳ ನೋವಿಗೆ ಹೆಗಲು ನೀಡಿದ… ಸುರತ್ಕಲ್ ಗೆಳೆಯರ ಬಳಗ ತಂಡದ ಹನ್ನೇಡನೇ ವರ್ಷದ ಶ್ರೀ ಶಾರದಾ ಹುಲಿವೇಷ ಅಬ್ಬರದಿಂದಲೇ ರಥಬೀದಿಯ ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದೆ. ಮಾತೃ ಸಂಸ್ಥೆಯ ಸಕ್ರಿಯ ಸದಸ್ಯ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿ ನೆನಪಲ್ಲಿ ಈ ಬಾರಿ ಈ ಹುಲಿವೇಷ ತಂಡ… ಬಹಳಷ್ಟು ಉತ್ಸಾಹಿ ಯುವಕರು ಹಾಗೂ ಪುಟಾಣಿ ಮಕ್ಕಳು ಹುಲಿವೇಷ ಧರಿಸುವ ಮೂಲಕ ಈ ಬಾರಿಯ ಸಮಾಜ ಸೇವೆಗೆ

ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭ

ಮಂಗಳೂರಿನ ಫಳ್ನೀರ್‍ನಲ್ಲಿರುವ ಸ್ಟರಕ್ ರಸ್ತೆಯ ಸ್ಟರಕ್ ಅವೆನ್ಯೂ ಕಟ್ಟಡದಲ್ಲಿ ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭಗೊಂಡಿತು. ಮಂಜೇಶ್ವರದ ಸಯ್ಯದ್ ಅಥಾವುಲ್ಲ ತಂಙಳ್ ನೂತನ ಕಚೇರಿಯನ್ನು ಉದ್ಘಾಟಿಸಿದರು… ಈ ವೇಳೆ ಬಂದರ್ ಅಲ್ ಮದ್ರಸತುಲ್ ಅಝ್ಹಾರಿಯದ ಮುಅಲ್ಲಿಂ ಮಹಮ್ಮದ್ ಹನೀಫ್ ದುಅ ನೆರವೇರಿಸಿದರು….. ಈ ವೇಳೆ ಸಂಸ್ಥೆಯ ಗ್ರಾಹಕರನ್ನು ಸನ್ಮಾನಿಸಲಾಯಿತು. ಸುಹಾನಾ ಟ್ರಾವೆಲ್ಸ್ ಜನರಿಗೆ ಉತ್ತಮ ಸೇವೆಯನ್ನು ನೀಡಲಿದ್ದು, ಇಲ್ಲಿ ಏರ್

ಪಾಜಕಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮಧ್ವಜಯಂತಿ ಮಹೋತ್ಸವ

ಆಚಾರ್ಯ ಮಧ್ವರ ಅವತರ ಭೂಮಿಯಾದ ಪಾಜಕಕ್ಷೇತ್ರದಲ್ಲಿ ವಿಜಯದಶಮಿಯಂದು ಮಧ್ವಜಯಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಸೋದೆ ವಾದಿರಾಜ ಮಹಾಮುನಿಗಳಿಂದ ಪ್ರತಿಷ್ಠಿತ ಆಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆಗಳು ನಡೆದವು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಆಗಮಿಸಿದ ವಿವಿಧ ವಿದ್ವಾಂಸರು ಸರ್ವಮೂಲ ಪಾರಾಯಣ ಹಾಗೂ ಉಪನ್ಯಾಸಗಳನ್ನು

ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಷ್ಣುಪಾಂಡ್ಯಾವರವರಿಗೆ ‘ಲಿಟೆರರಿ ಅವಾರ್ಡ್’

ಬೆಂಗಳೂರಿನ ಸೌಂದರ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಭಾಂಗಣದಲ್ಲಿ ಗ್ಲೋಬಲ್ ಮೋಟಿವೇಷನಲ್ ಸ್ಟ್ರಿಪ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಗುಜರಾತ್ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಲಿಟೆರರಿ ಅವಾರ್ಡ್’ ಕಾರ್ಯಕ್ರಮವನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಎಲ್ಲಾ ಅತಿಥಿ ಗಣ್ಯರು ಸೇರಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಕರ್ನಾಟಕ

ಪಚ್ಚನಾಡಿಯ 12 ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಪಚ್ಚನಾಡಿಯಲ್ಲಿ ಸುಮಾರು 12 ಕುಟುಂಬಗಳು ಕಾಗದ ಆಯುವ ಕಾಯಕ ಮಾಡುತ್ತಿದ್ದು ಪರೋಕ್ಷವಾಗಿ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ತನ್ನದೇ ಆದ ಕೊಡುಗೆ ಕೊಡುತ್ತಿದ್ದಾರೆ ಇವರೆಲ್ಲ ಮೂಲಭೂತ ಸೌಕರ್ಯದಿಂದ ವಂಚಿತರಗಿದ್ದು ಇಷ್ಟು ವರುಷ ಆಗಿದ್ದರು ಈ ಕುಟುಂಬಗಳು ಟೆಂಟ್ಗಳಲ್ಲಿ ವಾಸವಾಗಿದ್ದು ವಿದ್ಯುತ್ ಸಂಪರ್ಕ ಕಂಡವರಲ್ಲ ಇಲ್ಲಿ ಸುಮಾರು 20ಕ್ಕಿಂತ ಅಧಿಕ ಮಕ್ಕಳು ಶಾಲೆಗೆ ಹೋಗುತ್ತಿದ್ದು ಅವರಿಗೆ ಓದಲು