ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ
ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘ (ಕೆಎಲ್ಎಸ್) ಕೊಂಕಿಣಿ ಸಾಹಿತ್ಯ ಪ್ರಶಸ್ತಿ-೨೦೨೩ ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ. ೨೫ರ ಶನಿವಾರದಂದು ನಂತೂರು ಬಜ್ಜೋಡಿ ಸಂದೇಶ ಪ್ರತಿಷ್ಠಾನದ ಸಂದೇಶದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ’ರಾಕ್ಣೊ’ ವಾರಪತ್ರಿಕೆಯ ಮಾಜಿ ಸಂಪಾದಕ ರೆ| ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರಕಾರಿ ಕಾಲೇಜು ಪ್ರೊ. ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಐರಿನ್ ಪಿಂಟೊ, ಕೊಂಕಣಿ ಲೇಖಕಿ, ಕಾದಂಬರಿಕಾರ ಎಂದು ಗುರುತಿಸಿದ್ದಕ್ಕಾಗಿ ಇಡೀ ಕೊಂಕಣಿ ಸಾಹಿತ್ಯ ಲೋಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊಂಕಣಿ ಸಮುದಾಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಕೆಎಲ್ಎಸ್ನಿಂದ ಪ್ರಶಸ್ತಿ ಸ್ವೀಕರಿಸಿರುವುದು ನನಗೆ ಅಪಾರ ಸಂತಸ ತಂದಿದೆ. ನನ್ನ ಬೆಂಬಲಿಗರಿಗೆ, ಸಾಹಿತ್ಯಭಿಮಾನಿಗಳಿಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ, ಕೆಎಲ್ಎಸ್ಗೆ ಇನ್ನೂ ಅನೇಕ ವರ್ಷಗಳು ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ, ಎಂದು ನುಡಿದರು. ಪ್ರಶಸ್ತಿಯು ರೂ ೨೫೦೦೦ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಡಾ| ಎಡ್ವರ್ಡ್ ನಜ್ರೆತ್, ಶ್ರೀ ಎರಿಕ್ ಒಝೇರಿಯೊ, ಶ್ರೀ ಆಂಡ್ರ್ಯೂ ಎಲ್ ಡಿಕುನ್ಹಾ, ಶ್ರೀಮತಿ ಜೊಯ್ಸ್ ಒಝೇರುಯೊ ಮತ್ತು ಶ್ರೀ ವಲ್ಲಿ ಕ್ವಾಡ್ರಸ್ ಅವರನ್ನು ತಮ್ಮ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ಕೆಎಲ್ಎಸ್ನಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ’ರಾಕ್ಣೊ’ ಪತ್ರಿಕೆಯ ಮಾಜಿ ಸಂಪಾದಕ ರೆ| ಮಾರ್ಕ್ ವಾಲ್ಡರ್ ಬರೆದಿರುವ ’ಭಗವಾನ್ ಯೇಸು ಕ್ರಿಸ್ತ’ ( ತುಳು-ಮೂರನೇ ಆವೃತ್ತಿ) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಶ್ರೀ ರಿಚರ್ಡ್ ಮೊರಾಸ್ರವರಿಂದ ಪ್ರಸ್ತಾವನೆ, ಶ್ರೀ ಎಡ್ವರ್ಡ್ ನಜ್ರೆತ್ರವರಿಂದ ಶ್ರೀಮತಿ ಐರಿನ್ ಪಿಂಟೊ ಅವರ ಸಾಹಿತ್ಯ ಕೃತಿಗಳ ಪರಿಚಯ, ಶ್ರೀ ಮಾಚ್ಚಾ ಮಿಲಾರ್ರವರಿಂದ ವಂದನೆ, ಶ್ರೀ ಅನಿಲ್ ಮತ್ತು ಶ್ರೀಮತಿ ಐರಿನ್ ರೆಬೆಲ್ಲೊ ಇವರಿಂದ ಪ್ರಾರ್ಥನಾ ಗೀತೆ ಹಾಗೂ ಶ್ರೀಮತಿ ಲವಿ ಗಂಜಿಮಠರವರಿಂದ ಕಾರ್ಯಕ್ರಮ ನಿರೂಪಿಸಲ್ಪಟ್ಟಿತು. ಕೊಂಕಣಿ ಲೇಖಕ ಸಂಘ ಕರ್ನಾಟಕವು ೨೦೧೮ರಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಏಕೈಕ ಉದ್ದೇಶದಿಂದ ರಚಿಸಲ್ಪಟ್ಟ ಸ್ವಯಂಸೇವಾ ಸಂಘವಾಗಿದೆ. ೨೦೨೨ರಿಂದ, ಕೊಂಕಣಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕೊಂಕಣಿ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು.


















