ಉಳ್ಳಾಲ: ಬಸ್ ನಲ್ಲಿ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೆÇಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದÀ ಘಟನೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ನಡೆದಿದೆ. ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ 44ಸಿ ಬಸ್ಸಿನಲ್ಲಿ ಬಿಸಿರೋಡ್ ಮೂಲದ ಮಹಿಳೆ ತಸ್ಲಿಮಾ ಪ್ರಯಾಣಿಸುತ್ತಿರುವಾಗ 18 ಗ್ರಾಂ
ಆರೋಗ್ಯ ಪೀಡಿತರಿಗೆ ಅರವಾಗುವುದು, ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವ ಒತ್ತಾಸೆ ಹಾಗೂ ಕ್ರೀಡೆಯ ಮೂಲಕ ಸದೃಢ ಸಮಾಜದ ನಿರ್ಮಾಣದ ಗುರಿಯೊಂದಿಗೆ ಕೊಡೇರಿಯ ನವಮಿ ಡಾಟ್ ಕಾಮ್ ನಿಂದ 4ನೇ ಬಾರಿಗೆ ಕೊಡೇರಿಯ ವೈಸಿಸಿ ಕ್ರೀಡಾಂಗಣದಲ್ಲಿ ಐಪಿಎಲ್ಪಿ ಮಾದರಿಯ ಕೊಡೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹೊಸವರ್ಷದ ಮೊದಲ ದಿನ ನಡೆಯಿತು.ಕ್ಲಾಸಿಕ್ ಕ್ರಿಕೆಟರ್ಸ್ ವಿನ್ನರ್ ಹಾಗೂ ಎಂಡ್ ಪಾಯಿಂಟ್ ಕ್ರಿಕೆಟರ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿದರು. ಬೈಂದೂರು ತಾಲೂಕು ಬಿಜೆಪಿ
ರಾಮನಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಪೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ. ಪ್ರಸನ್ನ ಭಟ್ (26) ಮೃತ ಯುವಕ. ಜನವರಿ 1 ರಂದು ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಮೃತ ಪ್ರಸನ್ನ ಭಟ್ ಅವರು ಮಾವತ್ತೂರು ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕನಕಪುರ ಗಾಮಾಂತರ ಪೆÇಲೀಸ್ ಠಾಣೆ
ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ನಾನಾಗಲಿ, ನನ್ನ ಮಗ ಹರ್ಷ ಮೊಯ್ಲಿ ಅವರೂ ಸ್ಪರ್ಧಿಸುವುದಿಲ್ಲ. ಪಕ್ಷದ ಒಳ್ಳೆಯ ಕಾರ್ಯಕರ್ತರಿಗೆ ಸೀಟ್ ನೀಡಲಾಗುತ್ತದೆ. ಈ ಚುನಾವಣೆಯಲ್ಲಿ ಹರ್ಷ ಮೊಯ್ಲಿ ಅವರು ಕಾರ್ಕಳ ಮಾತ್ರವಲ್ಲ, ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ
ನಗರದ ತಣ್ಣೀರಬಾವಿ ಬೀಚ್ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಪೆÇಲೀಸರು ಲಾಠಿ ಚಾರ್ಜ್ ಮಾಡಿ ಘಟನೆ ನಡೆದಿದ್ದು, ” ಪೊಲೀಸರ ಅತಿರೇಕದ ವರ್ತನೆ” ಎಂದು ಸ್ಥಳೀಯರು ಕಿಡಿಕಾರಿದ ಘಟನೆ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳ ಮೇಲೆ ಕೂಡಾ ಪೊಲೀಸರು ಲಾಠಿ ಬೀಸಿರುವುದು ಕಂಡು ಸ್ಥಳೀಯರು ಗರಂ ಆಗಿದ್ದು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ. ವಿಕೇಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ
ಮಂಗಳೂರು: ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್ಎಫ್ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕುಲಶೇಖರ ಉಮಿಕಾನ ನಿವಾಸಿ, ಬಿಎಸ್ಎಫ್ ಯೋಧ ಹರೀಶ್ ಕುಮಾರ್ (43) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹರೀಶ್ ಕುಮಾರ್ ಅವರು ಕಳೆದ 21 ವರ್ಷಗಳಿಂದ ಅವರು ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಗಾಗಿ ಊರಿಗೆ ಬಂದಿದ್ದ ಡಿ. 31 ಹೃದಯಾಘಾತವಾಗಿದ್ದು, ಆಸ್ಪತ್ರೆ
ಕರಾವಳಿಯ ಕುವರ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇದೀಗ ಬಿಗ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ತುಳು ಚಿತ್ರಗಳ ಮೂಲಕ ಹಾಗೂ ಹಲವಾರು ಸಮಾಜ ಸೇವೆಗಳ ಮುಖಾಂತರ ಕರಾವಳಿಯ ಜನರ ಮನಸನ್ನು ಗೆದ್ದಿರುವ ರೂಪೇಶದ ಶೇಟ್ಟಿ, ಬಿಗ್ ಬಾಸ್ ಶೋ ನಲ್ಲಿ ವಿಜೇತರಾಗಿರುವುದು ಹೆಮ್ಮೆಯ ಸಂಗತಿ.ಸೆ.24ರಂದು ಶುರುವಾದ ಬಿಗ್ ಬಾಸ್ ಶೋ 100 ದಿನಗಳ ಕಾಲ ನಡೆದು, ಡಿ.31ಕ್ಕೆ ಮುಕ್ತಾಯಗೊಂಡಿದೆ. ಈ ಬಾರಿ ಒಟ್ಟು 18 ಮಂದಿ ಮನೆಯೊಳಗೆ ಎಂಟ್ರಿ ನೀಡಿದ್ದರು. ಅದರಲ್ಲಿ
ಮಂಗಳೂರು: ಪಣಂಬೂರು ಬೀಚ್ನ ಹೊಟೇಲ್ಗಳಿಗೆ ಏಕಾ ಏಕಿ ದಾಳಿ ನಡೆಸಿರುವ ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್ ಹೊಸ ವರ್ಷದಂದೇ ಹೊಸ ಸಂಚಲನ ಮೂಡಿಸಿದ್ದಾರೆ. ಬೀಚ್ ಬಳಿಯಲ್ಲಿರುವ ಹಲವು ಹೊಟೇಲ್, ಫಾಸ್ಟ್ ಫುಡ್ ಅಗಡಿಗೆ ತೆರಳಿ ಅಲ್ಲಿನ ಕಿಚನ್ ಪರಿಶೀಲಿಸಿದಾಗ ಶುಚಿತ್ವವೇ ಇಲ್ಲದ ವ್ಯವಸ್ಥೆ ಕಂಡು ಬಂದಿತ್ತು. ಅಲ್ಲದೇ ಶುಚಿತ್ವ ಇಲ್ಲದ ಕಿಚನ್, ಹಲವು ಬಾರಿ ಬಳಸಿದ ಎಣ್ಣೆ, ಇಲಿ ಕಚ್ಚಿದ ತರಕಾರಿಗಳು ಅಲ್ಲಿ ಕಂಡು ಬಂದವು. ಅಲ್ಲದೇ ಅಂಗಡಿ ಮಾಲಕರ ಬಳಿ
ಬಂಟ್ವಾಳ: ತುಂಬೆ ಗ್ರಾ.ಪಂ ಬಂಟ್ವಾಳ ಇದರ ಆಶ್ರಯದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟ ತುಂಬೆ ಇದರ ಸಹಕಾರದೊಂದಿಗೆ ಬಟ್ಟೆ ಕೈ ಚೀಲಗಳ ಬಿಡುಗಡೆ ಸಮಾರಂಭ ತುಂಬೆ ಗ್ರಾಮ ಪಂಚಾಯತಿ ಸಭಾಂಗಣಲ್ಲಿ ನಡೆಯಿತು. ತುಂಬೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ಪ್ರಾಸ್ತವಿಕವಾಗಿ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಪರಿಸರ ಹಾಳಾಗಿದೆ. ಬಳಸಿದ ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ಲಾಸ್ಟಿಕ್ ಚೀಲ ನಮ್ಮ
ಕೊರೊನಾ ವೈರಸ್ ಎಂಬ ಭಯಾನಕ ವಿಷರೋಗವು ಭಾರತ ದೇಶದಿಂದ ನಾಶವಾಗಿ ಹೋಗಲೆಂದು ಶಬರಿಮಲೆ ಕ್ಷೇತ್ರಕ್ಕೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಮೂಲಕ ಹರಕೆ ಹೊತ್ತು ಪಡುಬಿದ್ರಿ ಭಗವತಿ ಗ್ರೂಫ್ ಸದಸ್ಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ). ಎರಡು ವರ್ಷಗಳ ಹಿಂದೆ ಈ ಹರಕೆ ಹೇಳಿದ್ದರು. ಆದರೆ ಶಬರಿಮಲೆಗೆ ಪಾದಯಾತ್ರೆ ನಿಷಿದ್ಧವಿದ್ದರಿಂದ ಈ ಸೇವೆ ಮಾಡಲು ವಿಳಂಬವಾಯಿತು. ಹಲವು ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಕ್ಷೇತ್ರ ದರ್ಶನ ಮಾಡಿರುವ ಇವರು ಕಳೆದ




























