Home Posts tagged #udupi (Page 58)

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತದಾನ 

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಬೆಳ್ಳಗ್ಗೆ ತನ್ನ ಪತ್ನಿ ಹಾಗೂ ಸಹೋದರಿ ಜೊತೆಗೆ ಅಗಮಿಸಿ ಬಡಾನಿಡಿಯೂರು ಸನ್ಯಾಸಿ ಮಠದ ಬಳಿಯಿರುವ ಬೂತ್ ನಂಬರ್ 97 ರಲ್ಲಿ ಮತ ಚಾಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಂದ ಮತದಾನ

ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯಿಂದ ಮತದಾನ ಆರಂಭಗೊಂಡಿತು. ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಉಡುಪಿಯ ಬಾಲಕಿಯರ ಪದವಿ ಪೂರ್ವ

ಮೇ 10ರ ಮತದಾನ, ಮತಗಟ್ಟೆಗಳಿಗೆ ಚುನಾವಣಾ ಅಧಿಕಾರಿ, ಸಿಬ್ಬಂದಿ ನಿಯೋಜನೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,9061 ಮತದಾರರಿದ್ದು, ನಾಳೆ ಜರಗಲಿರುವ 29 ಮತಗಟ್ಟೆಗಳಿಗೆ ಚುನಾವಣೆ ಕರ್ತವ್ಯಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ಕಳಿಸಲು ಕಾರ್ಕಳ ಮಂಜುನಾಥ ಪೈ ಕಾಲೇಜಿನಿಂದ ವ್ಯವಸ್ಥೆ ಮಾಡಲಾಗಿದ್ದು ಬೆಳಗಿನಿಂದಲೇ ಪೆÇಲೀಸ್, ಅರೆ ಸೈನಿಕ ಪಡೆ, ಸ್ಥಳದಲ್ಲಿ ಹಾಜರಿದ್ದು, ಬೀಗು ಭದ್ರತೆಯೊಂದಿಗೆ ಚುನಾವಣೆ ಯಂತ್ರಗಳನ್ನು ಚುನಾವಣೆ ಕೇಂದ್ರಗಳಿಗೆ ಕಳುಹಿಸುವ ಕೆಲಸ

ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ಪ್ರಜಾ ವಿಜಯ ಬಹಿರಂಗ ಸಭೆ

ಕಾರ್ಕಳ: ನೈಜ ಹಿಂದುತ್ವದ ಮೂಲಕ ಹಿಂದು ಕಾರ್ಯಕರ್ತರಿಗೆ ಧ್ವನಿಯಾಗುವ ನಾಯಕ , ಪ್ರಮಾಣಿಕತೆ ಸಾಕ್ಷಿಯಾಗಿರುವ ಪ್ರಮೋದ್ ಮುತಾಲಿಕ್ ಅವರನ್ನು ಗೆಲ್ಲಿಸುವಂತೆ ಖ್ಯಾತ ವಾಗ್ಮಿ ವಿಖ್ಯಾತ ರಾವ್ ಅವರು ಮನವಿ ಮಾಡಿಕೊಂಡರು. ಅವರು ಕಾರ್ಕಳ ತಾಲೂಕಿನ ಹೊಸ್ಮಾರ್ ನಲ್ಲಿ ನಡೆದ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ನಡೆದ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಸುನೀಲ್ ಕುಮಾರ್ ಪಕ್ಷ ವಿರೋಧಿಗಳ ಬಳಿ ಕಾಲು ಹಿಡಿಯುವ ಬದಲು ನೀವು

ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ಕಳಿ ಚಂದ್ರಯ್ಯ ಆಚಾರ್ಯ ಮನವಿ

ಬೈಂದೂರು: ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಬೈಂದೂರು  ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಕಳಿ ಚಂದ್ರಯ್ಯ ಆಚಾರ್ಯ ಅವರು ಮನವಿ ಮಾಡಿದ್ದಾರೆ. ಬೈಂದೂರು ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಮಠ ಮಂದಿರಗಳಿಗೆ ಹೆಚ್ಚಿನ

ಮೇ 8ರಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಅಣ್ಣಾಮಲೈ ರೋಡ್  ಶೋ

ಬೈಂದೂರು: ತಮಿಳುನಾಡು ರಾಜ್ಯ  ಬಿಜೆಪಿ ಅಧ್ಯಕ್ಷರು ಹಾಗೂ  ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ  ಸಿಂಗಂ ಎಂದೇ ಖ್ಯಾತಿ ಪಡೆದಿರುವ ಕೆ. ಅಣ್ಣಾಮಲೈ ಅವರು ಮೇ 8ರಂದು ಬೈಂದೂರು ಕ್ಷೇತ್ರದ ವಿವಿಧಡೆಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚಿಸಲಿದ್ದಾರೆ. ಬೆಂಳಗ್ಗೆ 8.30ಕ್ಕೆ ತ್ರಾಸಿಯಿಂದ ರೋಡ್ ಶೋ ಆರಂಭಗೊಂಡು, ಮರವಂತೆ, ನಾವುಂದ, ಅರಹೊಳೆ ಬೈಪಾಸ್ ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ,

ಬೈಂದೂರು:  ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ

ಬೈಂದೂರು: ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಭಾನುವಾರ ಕ್ಷೇತ್ರದಾದ್ಯಂತ ಮಹಾಪ್ರಚಾರ ಅಭಿಯಾನ ಬಹಳ ಅದ್ದೂರಿಯಾಗಿ ನಡೆಯಿತು.  ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು  ಪಕ್ಷದ ಧ್ವಜ, ಕೇಸರಿ ಧ್ವಜ,  ಕೇಸರಿ ಶಲ್ಯಗಳನ್ನು ಧರಿಸಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರಿಗೆ ಮತ ನೀಡುವಂತೆ ಪ್ರತಿ ಬೂತನಲ್ಲೂ ಮಹಾ ಪ್ರಚಾರ ಅಭಿಯಾನ ನಡೆಸಿದರು. ಮನೆ ಮನೆಗೆ ಭೇಟಿ ನೀಡಿದ ಕಾರ್ಯಕರ್ತರು ಈ ವೇಳೆ ಕಳೆದ ಐದು ವರ್ಷದಲ್ಲಿ

ಕುಂದಾಪುರ : ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮತಯಾಚನೆ

ಕುಂದಾಪುರ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ  ಕಾರ್ಯಕರ್ತರೊಂದಿಗೆ ಬಾರಕೂರು ಭಾಗದಲ್ಲಿ  ಮತಯಾಚನೆ ಮಾಡಿದರು.ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ  ಕಾರ್ಮಿಕರಲ್ಲಿ  ಮತ್ತು  ಗೇರು ಬೀಜ ಫ್ಯಾಕ್ಟರಿಯ ಕಾರ್ಮಿಕರು ಸೇರಿದಂತೆ  ಕೂರಾಡಿ  ಬಾರಕೂರು ನಗರ ಭಾಗ ಸೇರಿದಂತೆ  ನಾನಾ ಭಾಗದ ಮತದಾರರನ್ನು ಭೇಟಿಯಾಗಿ ಮತಯಾಚಿಸಿದರು. ಈ ಸಂದರ್ಬ ಅವರು ಮಾತನಾಡಿ  ಕುಂದಾಪುರ ವಿಧಾನ ಸಭಾ ಕ್ಷೇತ್ರ ಕಳೆದ ಹಲವಾರು ವರ್ಷದಿಂದ ಒಂದೆ ವ್ಯಕ್ತಿ

ವಿಧಾನಸಭೆ ಚುನಾವಣೆ ಹಿನ್ನೆಲೆ: ಬ್ರಹ್ಮಾವರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣಾ ಅಂಗವಾಗಿ  ಬ್ರಹ್ಮಾವರ ತಾಲೂಕಿನಾದ್ಯಂತ ಪೊಲೀಸ್ ಇಲಾಖೆಯಿಂದ  ಬಿಗಿ ಬಂದೋಬಸ್ತ್  ನಡೆಯುತ್ತಿದೆ. ಸಾಬರಕಟ್ಟೆಯಲ್ಲಿ 4 ರಸ್ತೆಗಳು ಕೂಡುವ  ಅತೀ ಸೂಕ್ಷ್ಮ ಪ್ರದೇಶವಾದ  ಶಿವಮೊಗ್ಗ , ಹೆಬ್ರಿ , ಉಡುಪಿ ಮತ್ತು ಕುಂದಾಪುರಕ್ಕೆ  ಹೋಗುವಲ್ಲಿ ಕೋಟ ಠಾಣೆ ಮತ್ತು ಬ್ರಹ್ಮಾವರ 2 ಪೊಲೀಸ್ ಠಾಣಾ ವ್ಯಾಪ್ತಿ ಇದ್ದು ಅಲ್ಲಿ ಪೊಲಿಸ್ ಚೆಕ್ ಪೋಸ್ಟ್ ಮಾಡಲಾಗಿ ವಾಹನ ತಪಾಸಣೆಗಳು ನಡೆಯುತ್ತಿದೆ. ದಿನ 24 ಗಂಟೆಯು 3

ಕುಂದಾಪುರ: ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಬಾರಕೂರಿನಲ್ಲಿ ಮತಯಾಚನೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ ಕುಮಾರ್ ಕೊಡ್ಗಿ  ಕ್ಷೇತ್ರದ ದಕ್ಷಿಣ ಭಾಗದ ತುತ್ತ ತುದಿ ಬಾರಕೂರು ಭಾಗದಲ್ಲಿ ಮತಯಾಚನೆ ಮಾಡಿದರು.   ಪ್ರಥಮವಾಗಿ ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಮಾಲಕ ಶ್ರೀನಿವಾಸ ಶೆಟ್ಟಿಗಾರರವರನ್ನು  ಬೇಟಿ ನೀಡಿ ಇಲ್ಲಿನ ನೂರಾರು ಕಾರ್ಮಿಕರಲ್ಲಿ ಬೆಂಬಲಿಸುವಂತೆ ಮತಯಾಚನೆ ಮಾಡಿದರು.ಬಳಿಕ ನಾಯರಿಬೆಟ್ಟು,  ಬಾರಕೂರು ರಥ ಬೀದಿ ಮತ್ತು  ನಗರದ ಅಂಗಡಿ, ಮನೆಗಳಿಗೆ  ಬೇಟಿ ನೀಡಿ  ಮತಯಾಚನೆ ಮಾಡಿದರು.